ಇನ್ನು ಮುಂದೆ ಪಕ್ಷದ ಹಿರಿಯರು ಒಟ್ಟಾಗಿ ಸಾಮೂಹಿಕ ತೀರ್ಮಾನ ಕೈಗೊಳ್ಳಲಿದ್ದಾರೆ' ಎಂದು ವಿವರಿಸಿದರು. `ಕೆಜೆಪಿ ಸಮಾವೇಶದಲ್ಲಿ ವೇದಿಕೆ ಏರಿದವರನ್ನು ಮಾತ್ರವಲ್ಲ, ಬಿಎಸ್ಆರ್ ಕಾಂಗ್ರೆಸ್ ಜೊತೆ ಗುರುತಿಸಿಕೊಂಡ ಶಾಸಕರ ವಿರುದ್ಧವೂ ಕ್ರಮ ಕೈಗೊಳ್ಳದೆ ಬಿಡುವುದಿಲ್ಲ' ಎಂದು ಸ್ಪಷ್ಟವಾಗಿ ತಿಳಿಸಿದರು.
ಸಂಕೇಶ್ವರ ವಿರುದ್ಧ ಆಕ್ರೋಶ: `ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದ ವಿಜಯ ಸಂಕೇಶ್ವರ ಅವರು ಕದ್ದು-ಮುಚ್ಚಿ ರಾಜೀನಾಮೆ ಕೊಟ್ಟಿದ್ದೇಕೆ. ಅಂತಹ ಯಾವ ಸನ್ನಿವೇಶ ಇತ್ತು ಎಂದು ಸದಾನಂದಗೌಡ ಕೇಳಿದರು.
`ಮುಖ್ಯಮಂತ್ರಿಗಳು, ಪಕ್ಷದ ಅಧ್ಯಕ್ಷರು ಮತ್ತು ಹಿರಿಯರ ಜೊತೆ ಅವರು ಚರ್ಚೆ ನಡೆಸಬಹುದಿತ್ತು. ರಾಜೀನಾಮೆ ನೀಡುವಂತಹ ವಾತಾವರಣ ಏನಿತ್ತು ಎಂಬುದನ್ನು ವಿವರಿಸಬಹುದಿತ್ತು' ಎಂದು ಅಭಿಪ್ರಾಯಪಟ್ಟರು.