ನವದೆಹಲಿ (ಪಿಟಿಐ): ಭೂಕಂಪದ ಪೂರ್ವಸೂಚನೆ ಗಮನಿಸುವ ವ್ಯವಸ್ಥೆ ರೂಪಿಸುವ ಮೂಲಕ ಭಾರತ ಈ ವಿಷಯದಲ್ಲಿ ತನ್ನ ಸಂಶೋಧನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ.
`ಹಿಮಾಚಲ ಪ್ರದೇಶದ ಘುಟ್ಟು, ಮೇಘಾಲಯದ ಶಿಲ್ಲಾಂಗ್, ಮಹಾರಾಷ್ಟ್ರದ ಕೊಯ್ನಾ, ಅಂಡಮಾನ್ ಮತ್ತು ನಿಕೊಬಾರ್ನ ಪೋರ್ಟ್ಬ್ಲೇರ್ನಲ್ಲಿ ಈಗಾಗಲೇ ಇಂಥ ಸಾಧನಗಳನ್ನು ಅಳವಡಿಸಲಾಗಿದೆ.
ಇನ್ನಷ್ಟು ಕಡೆ ಇವುಗಳನ್ನು ಅಳವಡಿಸುವ ಯೋಜನೆ ಇದೆ~ ಎಂದು ಭಾರತೀಯ ಹವಾಮಾನ ಇಲಾಖೆಯ ಭೂಕಂಪಶಾಸ್ತ್ರ ವಿಭಾಗದ ಮುಖ್ಯಸ್ಥ ಆರ್.ಎಸ್.ದತ್ತಾತ್ರೇಯನ್ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.