ಪಶ್ಚಿಮ ಘಟ್ಟ ಪ್ರದೇಶದಲ್ಲಿರುವ ಕೆಲವು ತಾಣಗಳಿಗೆ `ವಿಶ್ವ ಪಾರಂಪರಿಕ ತಾಣ~ ಎಂಬ ಮಾನ್ಯತೆ ಒದಗಿಸುವ ಸಂಬಂಧ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿ ಆಗಿದ್ದ ಅವಧಿಯಲ್ಲಿ ಪ್ರಯತ್ನ ನಡೆಯಿತು. ಈಗ ಯುನೆಸ್ಕೊ ಪಶ್ಚಿಮ ಘಟ್ಟಗಳಿಗೆ ಆ ಮಾನ್ಯತೆ ನೀಡಿದೆ. ಇದನ್ನು ವಿರೋಧಿಸುವ ಮೂಲಕ ರಾಜ್ಯ ಬಿಜೆಪಿ ಸರ್ಕಾರ ವಾಜಪೇಯಿ ಅವರ ಆಶಯವನ್ನೂ ವಿರೋಧಿಸುತ್ತಿದೆ ಎಂದು ಚಂದ್ರಶೇಖರ್ ಅವರು ಈ ಸಂದರ್ಭದಲ್ಲಿ ಬೇಸರ ವ್ಯಕ್ತಪಡಿಸಿದರು.