ನೆಲಮಂಗಲ: ತಾಲ್ಲೂಕಿನ ಮಾಚೋನಾಯಕನಹಳ್ಳಿ, ನರಸಿಂಹಯ್ಯನಪಾಳ್ಯ, ಅಹೋಬಲಪಾಳ್ಯದ ರೈತರ ಜಮೀನುಗಳನ್ನು ಗೃಹ ಮಂಡಳಿಯವರು ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಿದ್ದು, ಈ ಸಂಬಂಧ ಸ್ಥಳ ಪರಿಶೀಲನೆಗಾಗಿ ಬಂದಿದ್ದ ಗೃಹಮಂಡಳಿ ಅಧಿಕಾರಿಗಳ ತಂಡಕ್ಕೆ ರೈತರು ದಿಗ್ಬಂಧನ ಹಾಕಿದ ಘಟನೆ ನಡೆದಿದೆ.
ಗೃಹ ಮಂಡಳಿ ಸಹಾಯಕ ನಿರ್ದೆಶಕ ವೀರೇಂದ್ರನಾಥ್, ಕಾರ್ಯನಿರ್ವಹಣಾಧಿಕಾರಿ ಅರುಣ್ಕುಮಾರ್, ಎಂಜಿನಿಯರ್ ಗುರುಪ್ರಸಾದ್, ಭೂಸ್ವಾಧೀನಾಧಿಕಾರಿ ಶಿವಯ್ಯ, ಸರ್ವೇಯರ್ ಚೌಡಯ್ಯ ನೇತೃತ್ವದ ತಂಡ ಮಾಚೋನಾಯಕನಹಳ್ಳಿಯಲ್ಲಿ ಸ್ಥಳ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಆಗಮಿಸಿತ್ತು. ಈ ವೇಳೆ ರೈತರು ದಿಗ್ಬಂದನ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
`ಈ ಹಿಂದೆ ಕೆಐಎಡಿಬಿ ಸ್ವಾಧೀನಪಡಿಸಿಕೊಂಡ 250 ಎಕರೆ ಜಮೀನಿಗೆ ಹೊಂದಿಕೊಂಡಿರುವ 350 ಎಕರೆ ಕೃಷಿ ಜಮೀನನ್ನು ಗೃಹ ಮಂಡಳಿಯವರು ಸ್ವಾಧೀನ ಪಡಿಸಿಕೊಳ್ಳಲು ನಿರ್ಧರಿಸಿದ್ದಾರೆ.