ನವದೆಹಲಿ (ಪಿಟಿಐ): 2ಜಿ ತರಂಗಾಂತರ ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು `ಐತಿಹಾಸಿಕ~ವಾದುದು ಎಂದು ಬಣ್ಣಿಸಿರುವ ಖ್ಯಾತ ವಕೀಲ ಪ್ರಶಾಂತ್ ಭೂಷಣ್, ಇದು ಅಕ್ರಮಗಳ ಮೂಲಕ ಲಾಭ ಪಡೆಯುವ ಕಾರ್ಪೊರೇಟ್ ಸಂಸ್ಥೆಗಳಿಗೆ ಮತ್ತು ಸಾರ್ವಜನಿಕ ಸೇವೆಗಳಲ್ಲಿರುವ ಭ್ರಷ್ಟರಿಗೆ ಕಠಿಣ ಸಂದೇಶ ರವಾನಿಸಿದೆ ಎಂದಿದ್ದಾರೆ.
ಮುಖ್ಯವಾಗಿ ಭ್ರಷ್ಟ ಕಾರ್ಪೊ ರೇಟ್ ಸಂಸ್ಥೆಗಳು ಮತ್ತು ಭ್ರಷ್ಟ ಸಾರ್ವಜನಿಕ ಅಧಿಕಾರಿಗಳು ಅಕ್ರಮಗಳ ಮೂಲಕ ಲಾಭಗಳಿಸುವುದಕ್ಕೆ ಈ ದೇಶವು ಇನ್ನು ಮುಂದೆ ಅವಕಾಶ ನೀಡುವುದಿಲ್ಲ ಎಂಬ ಸ್ಪಷ್ಟ ಸಂಕೇತ ರವಾನಿಸಿದೆ ಎಂದಿದ್ದಾರೆ.