ಒಂದೆಡೆ, ಈ ಪಕ್ಷ ರಾಷ್ಟ್ರದ ಉದ್ದಗಲಕ್ಕೂ ಭ್ರಷ್ಟಾಚಾರದ ವಿರುದ್ಧ ಯಾತ್ರೆ ನಡೆಸುತ್ತದೆ. ಮತ್ತೊಂದೆಡೆ, ಭ್ರಷ್ಟಾಚಾರದಲ್ಲಿ ಸಿಲುಕಿ ಬೇರೆ ಪಕ್ಷಗಳಿಂದ ಉಚ್ಛಾಟನೆಗೊಂಡವರನ್ನು ಬರಸೆಳೆದುಕೊಳ್ಳುತ್ತಿದೆ. ಮಾಯಾವತಿ ಅವರಿಂದ ಉಚ್ಛಾಟನೆಗೊಂಡ ಬಾಬು ಸಿಂಗ್ ಕುಶವಾ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದು ಇದಕ್ಕೆ ತೀರಾ ಇತ್ತೀಚಿನ ಉದಾಹರಣೆ ಎಂದವರು ಗೇಲಿ ಮಾಡಿದರು.