ಪಣಜಿ (ಐಎಎನ್ಎಸ್): ಸ್ವತಃ ಕಲಿದ್ದಲು ಗಣಿ ಹಗರಣದಲ್ಲಿ ಸಿಲುಕಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಭ್ರಷ್ಟಾಚಾರ ಕುರಿತಂತೆ ಮಾತನಾಡಲು ಯಾವುದೇ ನೈತಿಕ ಅಧಿಕಾರವಿಲ್ಲ ಎಂದು ಬಿಜೆಪಿ ಸಂಸದ ರಾಜೀವ್ ಪ್ರತಾಪ್ ರೂಢಿ ಗುರುವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ರೂಢಿ ಅವರು ~ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ವಿರುದ್ಧ ಸಾಮಾಜಿಕ ಕಾರ್ಯಕರ್ತ ಅರವಿಂದ ಕೇಜ್ರಿವಾಲ್ ಅವರು ಮಾಡಿರುವ ಅವ್ಯವಹಾರ ಆರೋಪಗಳ ಕುರಿತು ತನಿಖೆಗೆ ನಡೆಸಲಿ~ ಎಂದು ಆಗ್ರಹಿಸಿದರು.
`ಸಿಬಿಐ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡುವ ಸಮಯದಲ್ಲಿ (ಬುಧವಾರ) ಪ್ರಧಾನಿಯವರು ಭ್ರಷ್ಟಾಚಾರ ವಿರೋಧಿ ಕಾನೂನಿನ ವಿಸ್ತಾರವು ಖಾಸಗಿ ವ್ಯಕ್ತಿಗಳಿಗೂ ಸಹ ವಿಸ್ತರಿಸುವ ಮಾತನಾಡಿದ್ದಾರೆ. ಅವರು ಸ್ವತಃ ಕಲಿದ್ದಲು ಹಗರಣದಲ್ಲಿ ಭಾಗವಹಿಸಿರುವುದರಿಂದ ಭ್ರಷ್ಟಾಚಾರ ಕುರಿತಂತೆ ಮಾತನಾಡಲು ಅವರಿಗೆ ಯಾವುದೇ ನೈತಿಕ ಅಧಿಕಾರವಿಲ್ಲ~ ಎಂದು ಹೇಳಿದರು.
ಪ್ರಧಾನಿ ಅವರು ಖಾಸಗಿ ವಲಯಗಳನ್ನು ಕೂಡ ಭ್ರಷ್ಟಾಚಾರ ಕಾನೂನಿನಡಿ ಎಳೆತರಲು ಒತ್ತು ನೀಡಬೇಕು ಎಂದಿದ್ದಾರೆ. ಆದ್ದರಿಂದ ಲಂಚ `ಪೂರೈಕೆ ಬದಿ~ಯನ್ನು ಗಣನೆಗೆ ತೆಗೆದುಕೊಳ್ಳಬಹುದು ಎಂದು ತಿಳಿಸಿದರು.
ವಾದ್ರಾ ವಿರುದ್ಧದ ಕೇಜ್ರಿವಾಲ್ ಅವರ ಆರೋಪ ಕುರಿತಾದ ಪ್ರಶ್ನೆಗೆ ಉತ್ತರಿಸಿದ ರೂಢಿ `(ಅವರನ್ನು) ಸಂಪೂರ್ಣ ತನಿಖೆಗೆ ಒಳಪಡಿಸುವ ಅಗತ್ಯವಿದೆ~ ಎಂದರು.