ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿಯನ್ನು ಶೋಧನಾ ಸಮಿತಿಯ ಮೂಲಕ ಮಾಡಬೇಕು ಎಂದು ಪಿ.ಸಿ. ಹೋಟಾ ಸಮಿತಿ ಮಾಡಿದ್ದ ಶಿಫಾರಸನ್ನು ಸರ್ಕಾರ ತಿರಸ್ಕರಿಸಿರುವುದು ಸರಿಯಲ್ಲ.
ಭ್ರಷ್ಟಾಚಾರದ ಆರೋಪ ಇರುವುದೇ ಅಧ್ಯಕ್ಷರು ಮತ್ತು ಸದಸ್ಯರ ಮೇಲೆ. ಮುಖ್ಯಮಂತ್ರಿಯವರು ಭ್ರಷ್ಟಾಚಾರದ ಮೂಲ ಬೇರನ್ನೇ ಕೀಳದೆ ಅದಕ್ಕೆ ಸಾಮಾಜಿಕ ನ್ಯಾಯದ ನೆಪದಲ್ಲಿ ರಕ್ಷಣೆ ನೀಡುವುದು ಎಷ್ಟರಮಟ್ಟಿಗೆ ಸರಿ? ನೇಮಕಾತಿ ಮಾಡುವವರ ನೇಮಕಾತಿಯನ್ನೂ ಪಾರದರ್ಶಕಗೊಳಿಸಬೇಕಿದೆ.