ಲಂಡನ್(ಪಿಟಿಐ): 2024ರ ಹೊತ್ತಿಗೆ ಮಂಗಳ ಗ್ರಹದಲ್ಲಿ ಶಾಶ್ವತ ಮಾನವ ವಸಾಹತು ನಿರ್ಮಿಸುವ ಮಹತ್ವಾಕಾಂಕ್ಷೆ ಯೋಜನೆ ‘ಏಕಮುಖ ಯಾನ’ಕ್ಕೆ ಆಯ್ಕೆಯಾದವರ ಅಂತಿಮ ಪಟ್ಟಿಯಲ್ಲಿ 62 ಭಾರತೀಯರು ಸೇರಿದ್ದಾರೆ.
ನೆದರ್ಲೆಂಡ್ನ ಮಾರ್ಸ್ ಒನ್ ಸಂಸ್ಥೆ ಈ ಯೋಜನೆ ರೂಪಿ-ಸಿದ್ದು, ಇದಕ್ಕಾಗಿ ವಿಶ್ವದಾದ್ಯಂತ ಎರಡು ಲಕ್ಷ ಜನ ಅರ್ಜಿ ಸಲ್ಲಿಸಿದ್ದರು. ಇವರಲ್ಲಿ ಅಂತಿಮವಾಗಿ 1,058 ಜನ ಆಯ್ಕೆಯಾಗಿದ್ದಾರೆ.