ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಮಂಗಳಕ್ಕೆ ಉಪಗ್ರಹ' ಪ್ರಚಾರ ತಂತ್ರ - ನಾಯರ್

Last Updated 24 ಜುಲೈ 2013, 11:32 IST
ಅಕ್ಷರ ಗಾತ್ರ

ಬೆಂಗಳೂರು (ಪಿಟಿಐ): ಮುಂಬರುವ ದಿನಗಳಲ್ಲಿ ರೂ.450 ಕೋಟಿ ವೆಚ್ಚದಲ್ಲಿ ಮಂಗಳ ಗ್ರಹದ ಅಧ್ಯಯನಕ್ಕೆ `ದೇಶಿ' ಉಪಗ್ರಹ ಕಳುಹಿಸುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಯೋಜನೆಯು `ಪ್ರಚಾರ ತಂತ್ರ'ವಾಗಿದೆ ಎಂದು ಸಂಸ್ಥೆಯ ಮಾಜಿ ಅಧ್ಯಕ್ಷ ಜಿ. ಮಾಧವನ್ ನಾಯರ್ ಆರೋಪಿಸಿದರು.

'ಅತ್ಯುತ್ತಮವಾದ ಈ ಯೋಜನೆಯನ್ನು ಇಸ್ರೊ ಪ್ರಚಾರ ತಂತ್ರವನ್ನಾಗಿ ಬಳಸಿಕೊಂಡಿದೆ' ಎಂದು ನಾಯರ್ ಟೀಕಿಸಿದರು.

ಸದ್ಯ ದೇಶ ತೀವ್ರ ತರದ ಸಂವಹನ ವಾಹಕಗಳ ಕೊರತೆ ಎದುರಿಸುತ್ತಿದೆ. ಈ ಸಮಸ್ಯೆಯನ್ನು ಕೆ.ಕಸ್ತೂರಿ ರಂಗನ್ ಸಮೀತಿಯ ಶಿಫಾರಸುಗಳನ್ನು ಅನುಸರಿಸುವ ಮೂಲಕ ಇಸ್ರೊ ಬಗೆಹರಿಸಬೇಕು ಎಂದು ಅವರು ಒತ್ತಾಯಿಸಿದರು.

`ಒಂದು ವೇಳೆ ಉಡಾವಣೆ ನಡೆದರೆ ಅದು ಮತ್ತೊಂದು ಪಿಎಸ್‌ಎಲ್‌ವಿ ಉಡಾವಣೆ ಮಾತ್ರವಷ್ಟೇ. ಒಂದು ಉಡಾವಣೆ ಚಂದ್ರನಿಗೆ ತಲುಪಿದ ನಂತರ ಮತ್ತೊಂದು ಉಡಾವಣೆಗೆ ಸುಮಾರು ಎಂಟು ತಿಂಗಳು ಕಾಯಬೇಕು. ಈ ವಿಷಯ ಕುರಿತಂತೆ ವೈಜ್ಞಾನಿಕ ಸಮುದಾಯದಿಂದ ಗಂಭೀರ ವಿಮರ್ಶೆ ನಡೆಯುವ ಅಗತ್ಯವಿದೆ' ಎಂದು ಅವರು ತಿಳಿಸಿದರು.

`ಮಂಗಳ ಗ್ರಹದ ಸಮಗ್ರ ಅಧ್ಯಯನಕ್ಕೆ ಅಕ್ಟೋಬರ್ ಕೊನೆಯ ವಾರದಲ್ಲಿ ಗಗನ ನೌಕೆ  ಕಳುಹಿಸಲಾಗುವುದು' ಎಂದು ಇಸ್ರೊ ಅಧ್ಯಕ್ಷ ಡಾ.ಕೆ.ರಾಧಾಕೃಷ್ಣನ್ ಅವರು ಇತ್ತೀಚಿಗಷ್ಟೇ ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT