ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ವಭಾವಿ ಕಾರ್ಯ
ಬೆಂಗಳೂರು, ಜ. 9 - ಭಾರತದಲ್ಲಿ ಇದುವರೆಗೆ ಕೈಗೊಂಡಿರುವ ಅತಿ ದೊಡ್ಡ ನೀರಾವರಿ ಯೋಜನೆಗಳಲ್ಲಿ ಒಂದಾದ ಸುಮಾರು 106 ಕೋಟಿ ರೂಪಾಯಿಗಳ ಅಂದಾಜು ವೆಚ್ಚದ ಕೃಷ್ಣಾ ಮೇಲ್ದಂಡೆ ಯೋಜನೆಯ ಪೂರ್ವಭಾವಿ ಕಾರ್ಯಗಳನ್ನು ಶೀಘ್ರದಲ್ಲಿಯೇ ಆರಂಭಿಸಲಾಗುವುದೆಂದು ಇಂದು ಇಲ್ಲಿ ತಿಳಿದು ಬಂದಿದೆ.
`ಭಾರತ ಕ್ರಮ ಕೈಗೊಂಡರೆ ರಷ್ಯ ಚೀಣದ ಪಕ್ಷವಹಿಸದು~
ಲಂಡನ್, ಜ. 9 - ರಷ್ಯ ಮತ್ತು ಕಮ್ಯುನಿಸ್ಟ್ ಚೀಣದ ನಡುವೆ ಬೆಳೆಯುತ್ತಿರುವ ತಾತ್ವಿಕ ಮತ್ತು ವಾಸ್ತವ ಭಿನ್ನಾಭಿಪ್ರಾಯಗಳನ್ನು ಇಂದು `ಈವಿನಿಂಗ್ ಸ್ಟಾಂಡರ್ಡ್~ ಪತ್ರಿಕೆಯಲ್ಲಿ ದೀರ್ಘವಾಗಿ ಚರ್ಚಿಸುತ್ತ ಖ್ಯಾತ ವಾಮವಾದಿ ಲೇಖಕ ಪಾಲ್ ಜಾನ್ಸನ್ ಅವರು `ಭಾರತದ ಪ್ರದೇಶದಿಂದ ಚೀಣೀಯರನ್ನು ಭಾರತ ಹಿಂದಕ್ಕಟ್ಟಿದರೆ ರಷ್ಯವು ಚೀಣದ ಪಕ್ಷ ವಹಿಸುವುದಿಲ್ಲ~ ಎಂದು ಸ್ಪಷ್ಟಪಡಿಸಿದ್ದಾರೆ.