ಮಂಗಳವಾರ, 10-7-1962
ಉಪಸಭಾಪತಿ ಆಗಿ ಲಕ್ಷಮ್ಮ ಆಯ್ಕೆ
ಬೆಂಗಳೂರು, ಜುಲೈ 9 - 49 ವರ್ಷ ವಯಸ್ಸಿನ ಕಾಂಗ್ರೆಸ್ ಸದಸ್ಯೆ ಶ್ರೀಮತಿ ಎಂ. ಆರ್. ಲಕ್ಷಮ್ಮ ಅವರು ಇಂದು ವಿಧಾನ ಪರಿಷತ್ತಿನ ಉಪಾಸಭಾಪತಿಗಳಾಗಿ ಅವಿರೋಧವಾಗಿ ಚುನಾಯಿತರಾದರು.
ಸ್ಲೇಟು ಉಜ್ಜಲೂ ಸಾರಾಯಿ !
ಬೆಂಗಳೂರು, ಜುಲೈ 9 -`ಹುಡುಗನೊಬ್ಬ ಸ್ಲೇಟನ್ನು ಉಜ್ಜಲು ನೀರಿನ ಬದಲು ಸಾರಾಯಿ ತುಂಬಿ ಕೊಂಡು ಹೋದ~.ದಕ್ಷಿಣ ಕನ್ನಡ ಜಿಲ್ಲೆಯ ಕಾಪುವಿನಲ್ಲಿ ನಡೆದ ಪ್ರಸಂಗವನ್ನು ಪಿ. ಎಸ್. ಪಿ. ಸದಸ್ಯ ಶ್ರೀ ಬಿ. ಭಾಸ್ಕರಶೆಟ್ಟಿಯವರು ಇಂದು ವಿಧಾನ ಸಭೆಯಲ್ಲಿ ವಿವರಿಸಿದರು.
ಅಮೆರಿಕದಿಂದ ನ್ಯೂಕ್ಲಿಯರ್ ಸ್ಫೋಟ
ಹೊನಲೂಲು, ಜುಲೈ 9 - ಪೆಸಿಫಿಕ್ ಜಾನ್ಸ್ಟನ್ ದ್ವೀಪದಲ್ಲಿ ಅಮೆರಿಕವು ಇಂದು ವಾತಾವರಣದಲ್ಲಿ ಸುಮಾರು ಇನ್ನೂರು ಮೈಲಿ ಎತ್ತರದಲ್ಲಿ (320 ಕಿಲೊಮೀಟರ್ಸ್) ಒಂದು ಮೆಗಾಟನ್ ಶಕ್ತಿಗೂ ಮೀರಿದ ಪ್ರಬಲ ನ್ಯೂಕ್ಲಿಯರ್ ಸಾಧನವೊಂದನ್ನು ಆಸ್ಫೋಟಿಸಿತು.