ಸಂಧಾನದ ಮೂಲಕ ಗಡಿ ವಿವಾದ ಇತ್ಯರ್ಥಕ್ಕೆ
ಪುನಃ ಚೀಣಕ್ಕೆ ಕರೆ
ನವದೆಹಲಿ, ಮೇ 14 - ಲಡಕ್ ಪ್ರದೇಶದಲ್ಲಿ ಭಾರತದ ಭೂಪಟಕ್ಕೆ ಅನುಗುಣವಾಗಿ ಚೀಣೀಯರೂ ಚೀಣದ ಭೂಪಟದಂತೆ ಭಾರತೀಯರೂ ತಾತ್ಕಾಲಿಕವಾಗಿ ಹಿಂದೆ ಸರಿದು ಚೀಣ - ಭಾರತ ಗಡಿ ವಿವಾದದ ಇತ್ಯರ್ಥಕ್ಕೆ ಪ್ರಯತ್ನಿಸಬೇಕೆಂದು ಪ್ರಧಾನ ಮಂತ್ರಿ ನೆಹರೂ ಅವರು ಇಂದು ಪುನಃ ಚೀಣಕ್ಕೆ ಕರೆ ನೀಡಿದರು.
ವಿದೇಶಾಂಗ ಸಚಿವ ಶಾಖೆಯ ಬೇಡಿಕೆಗಳ ಬಗ್ಗೆ ಚರ್ಚೆಗೆ ಉತ್ತರ ಕೊಡುತ್ತ ತಮ್ಮ ಈ ಕರೆಯನ್ನು ಚೀಣವು ನಿರಾಕರಿಸಿದ್ದರೂ ಯುದ್ಧ ಮಾಡದೆ ಸಂಧಾನದ ಮೂಲಕ ವಿವಾದದ ಪರಿಹಾರಕ್ಕೆ ಇದು ಉತ್ತಮ ಮಾರ್ಗವೆಂದು ನೆಹರೂ ಹೇಳಿದರು.
ವರ್ಷಕ್ಕೆ 15,000 ರೂ. ನಿವೃತ್ತಿ ವೇತನ
ನವದೆಹಲಿ, ಮೇ 14 - ನಿವೃತ್ತ ರಾಷ್ಟ್ರಪತಿ ರಾಜೇಂದ್ರ ಪ್ರಸಾದರಿಗೆ ವರ್ಷಕ್ಕೆ 15,000 ರೂ. ನಿವೃತ್ತಿ ವೇತನ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆಯೆಂದು ತಿಳಿದು ಬಂದಿದೆ.
ಜೊತೆಗೆ ಡಾ. ಪ್ರಸಾದರು ವೈಯಕ್ತಿಕ ಸೆಕ್ರೆಟೆರಿಯೇಟ್ ಹೊಂದಲು ಪ್ರತ್ಯೇಕವಾಗಿ ವರ್ಷಕ್ಕೆ 15,000 ರೂ. ಕೊಡಲು ನಿರ್ಧರಿಸಿದೆ.