ಅಧಿವೇಶನ ಆರಂಭ
ಮಾಸ್ಕೊ, ಅ. 17 - ಸೋವಿಯತ್ ಕಮ್ಯುನಿಸ್ಟ್ ಪಾರ್ಟಿಯ 22ನೇ ಅಧಿವೇಶನವು ಇಂದು ಆರಂಭವಾಯಿತು. ಪ್ರತಿನಿಧಿಗಳ ಪೈಕಿ ಮಾಜಿ ಪ್ರಧಾನಿ ಬುಲ್ಗಾನಿನ್ ಸಹಾ ಇದ್ದರು.
ಪ್ರಧಾನ ಮಂತ್ರಿಯೂ, ಪಕ್ಷದ ಪ್ರಥಮ ಕಾರ್ಯದರ್ಶಿಯೂ ಆದ ನಿಕಿಟಾ ಖ್ರುಶ್ಚೋವ್ ಅಧ್ಯಕ್ಷತೆ ವಹಿಸಿದ್ದರು. ಈ ಸಮಾವೇಶಕ್ಕೆ ಆಲ್ಬೇನಿಯದಿಂದ ನಿಯೋಗ ಬಂದಿಲ್ಲವೆಂಬುದನ್ನು ವೀಕ್ಷಕರು ಗಮನಿಸಿದರು.
`ಪಕ್ಷಪಾತ ನಡೆದಿದೆಯೆಂದು ತಿಳಿಯದು~
ಬೆಂಗಳೂರು, ಅ. 17 - ಮಂಡಲ ಕಾಂಗ್ರೆಸ್ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿಗಳು ಕಾಂಗ್ರೆಸ್ ಅಭ್ಯರ್ಥಿಗಳನ್ನು ಶಿಫಾರಸು ಮಾಡುವುದರಲ್ಲಿ ಏಕಪಕ್ಷೀಯವಾದ ಭೇದ ನಡೆದಿದೆ ಎಂಬುದು ತಮಗೆ ತಿಳಿಯದೆಂದು ಎಂ.ಪಿ.ಸಿ.ಸಿ. ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪ ಅವರು ಇಂದು ಇಲ್ಲಿ ವರದಿಗಾರರಿಗೆ ತಿಳಿಸಿದರು.
`ಮುಖ್ಯಮಂತ್ರಿ ಶ್ರೀ ಬಿ. ಡಿ. ಜತ್ತಿ ಅವರು ಏನೇ ಹೇಳಿರಲಿ ಕಡೆಯ ಪಕ್ಷ ಮುಂದಿನ ವ್ಯವಸ್ಥೆಯಲ್ಲಾದರೂ (ಸರ್ಕಾರ) ಗುಂಪು ಹಾಗೂ ಪಕ್ಷಗಳು ಇಲ್ಲದಂತಾಗಬೇಕೆಂಬದು ನನ್ನ ಸ್ಪಷ್ಟ ನಿಲುವು~ ಎಂದರು.