ಏನೇ ಆದರೂ ಚೀಣದೊಡನೆಸಂಧಾನಕ್ಕೆ ಸಿದ್ಧ
ನವದೆಹಲಿ, ಅ. 1 - ಏನೇ ಆದರೂ, ಚೀಣಿಯರು ಭಾರತದ ಬಗ್ಗೆ ಸೌಜನ್ಯ - ಗೌರವಗಳಿಂದ್ದರೆ ಅವರೊಡನೆ ಸಂಧಾನಕ್ಕೆ ತಾವು ಸದಾ ಸಿದ್ದರಿರುವುದಾಗಿ ಪ್ರಧಾನ ಮಂತ್ರಿ ನೆಹರೂ ಇಂದು ಘೋಷಿಸಿದರು.
ಈಶಾನ್ಯ ಗಡಿ ಪ್ರದೇಶದಲ್ಲಿ ಈಚಿನ ಘಟನೆಗಳ ದೃಷ್ಟಿಯಿಂದ ಭಾರತ - ಚೀಣ ಮಾತುಕತೆ ಸಲಹೆಯನ್ನು ಹಿಂತೆಗೆದುಕೊಳ್ಳುವಿರಾ ಎಂದು ವರದಿಗಾರನೊಬ್ಬ
ಕೇಳಿದಾಗ ನೆಹರು ತೊಡೆತಟ್ಟಿ ಹೇಳಿದರು: `ಏನೇ ಆದರೂ ಮಾತುಕತೆಗೆ ನಾನು ಸದಾ ಸಿದ್ಧ. ಆದರೆ ಅವರು ನಮ್ಮ ಬಗ್ಗೆ ಸೌಜನ್ಯ, ಗೌರವಗಳಿಂದಿರಬೇಕು. ಯಾರೊಡನೆ ಮಾತನಾಡಲು ನಾನು ಎಂದೂ ನಿರಾಕರಿಸಿಲ್ಲ~.
ಬರ್ಲಿನ್ ಗೋಡೆ ಕೆಡವುವಜೂತ್ಷಿ ಅವರ ಯತ್ನಕ್ಕೆಅಧಿಕಾರಿಗಳ ಅಡ್ಡಿ
ಬರ್ಲಿನ್, ಅ. 1 - ಬರ್ಲಿನ್ ಗಡಿ ಗೋಡೆಯನ್ನು ನಾಳೆ ಸುತ್ತಿಗೆಯಿಂದ ಕೆಡವಲು ಭಾರತದ ಶಾಂತಿವಾದಿ ಶ್ರೀ ತಾಪೇಶ್ವರನಾಥ ಜೂತ್ಷಿಯವರು ನಡೆಸಲಿರುವ ಯತ್ನವನ್ನು ತಾವು ಅಡ್ಡಿಪಡಿಸುವುದಾಗಿ ಪಶ್ಚಿಮ ಬರ್ಲಿನ್ ನಗರದ ಅಧಿಕಾರಿಗಳು ಇಂದು ಪ್ರಕಟಿಸಿದರು.