ಸೇಲಂ - ಬೆಂಗಳೂರು ರೈಲ್ವೆ ನಿರ್ಮಾಣ ಆರಂಭ
ಸೇಲಂ, ಜ. 23 - ಕಳೆದ ಐದು ದಶಕಗಳಿಂದಲೂ ಚಳವಳಿಗೆ ಕಾರಣವಾಗಿದ್ದ ಸೇಲಂ - ಬೆಂಗಳೂರು ರೈಲು ಮಾರ್ಗ ನಿರ್ಮಾಣದ ಕಾರ್ಯವನ್ನು ಮದರಾಸಿನ ಮುಖ್ಯಮಂತ್ರಿ ಶ್ರೀ ಕಾಮರಾಜರು ಇಂದು ಇಲ್ಲಿ ಉದ್ಘಾಟಿಸಿದರು.
ಕಾಶ್ಮೀರ ಪ್ರಶ್ನೆ ಇತ್ಯರ್ಥಕ್ಕೆ ಕೆನೆಡಿ ಸಲಹೆ
ಕರಾಚಿ, ಜ. 23 - ಕಾಶ್ಮೀರ ಸಮಸ್ಯೆಗೆ ತೃಪ್ತಿಕರ ಪರಿಹಾರವನ್ನು ಕಂಡುಕೊಳ್ಳುವ ಕಾರ್ಯದಲ್ಲಿ ಉಭಯತ್ರರಿಗೂ ಒಪ್ಪಿಗೆಯಾಗುವ ವ್ಯಕ್ತಿಯೊಬ್ಬರು ಪ್ರಭಾವ ಬೀರಲು ಸಮ್ಮತಿ ನೀಡುವಿರಾ ಎಂದು ಅಧ್ಯಕ್ಷ ಕೆನೆಡಿಯವರು ಭಾರತ ಮತ್ತು ಪಾಕಿಸ್ತಾನಗಳನ್ನು ಕೇಳಿದ್ದಾರೆ.