ಶರಾವತಿ ಯೋಜನೆ ವಾರದಲ್ಲಿ ಶ್ವೇತಪತ್ರ
ಬೆಂಗಳೂರು, ಡಿ. 23 – ಬಹುಶಃ ಇನ್ನೊಂದು ವಾರದಲ್ಲಿ ಶರಾವತಿ ಯೋಜನೆಗೆ ಸಂಬಂಧಿಸಿದ ಶ್ವೇತಪತ್ರವನ್ನು ಪ್ರಕಟಿಸುವುದಾಗಿ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪ ಅವರು ಇಂದು ವಿಧಾನ ಸಭೆಯಲ್ಲಿ ತಿಳಿಸಿದರು.
ಈ ಯೋಜನೆಯ ಬಗ್ಗೆ ಶ್ರೀ ಎಸ್. ಎಂ. ಕೃಷ್ಣ ಹಾಗೂ ಶ್ರೀ ನಾಮೋಷಿ ಅವರುಗಳು ಪ್ರಶ್ನೆಗಳನ್ನು ಹಾಕಿದ್ದರು.
ಸದ್ಯಕ್ಕೆ ಬ್ಯಾಂಕುಗಳ ರಾಷ್ಟ್ರೀಕರಣವಿಲ್ಲ
ನವದೆಹಲಿ, ಡಿ. 23 – ಸರ್ಕಾರವು ಸದ್ಯಕ್ಕೆ ಬ್ಯಾಂಕುಗಳ ರಾಷ್ಟ್ರೀಕರಣವನ್ನು ಕೈಗೊಳ್ಳುವುದಿಲ್ಲವೆಂದು ಹಣಕಾಸಿನ ಸಚಿವ ಶಾಖೆಯ ಸ್ಟೇಟ್ ಸಚಿವ ಶ್ರೀ ಬಿ. ಆರ್. ಭಗತ್ ಅವರು ಇಂದು ರಾಜ್ಯ ಸಭೆಯಲ್ಲಿ ಪ್ರಕಟಿಸಿದರು.