‘ಕನ್ನಡ ಬರದ ಉಪಕುಲಪತಿ:’ ಸೆನೆಟ್ನಲ್ಲಿ ಸಭಾತ್ಯಾಗ
ಬೆಂಗಳೂರು, ಸೆ. 23– ಕನ್ನಡಬಾರದ ವ್ಯಕ್ತಿ ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಯಾಗಿ ನೇಮಕಗೊಂಡುದಕ್ಕೆ ಇಂದು ಸೆನೆಟ್ ಸಭೆಯಲ್ಲಿ ಸದಸ್ಯರೊಬ್ಬರು ಪ್ರತಿಭಟನೆ ಸಲ್ಲಿಸಿ ಸಭಾತ್ಯಾಗ ಮಾಡಿದರು.
ನೂತನ ಉಪಕುಲಪತಿ ಶ್ರೀ ಸರ್ದಾರ್ ಪಣಿಕ್ಕರ್ ಅವರಿಗೆ ಕನ್ನಡ ಬರುವುದೆ ಎಂದು ಶ್ರೀ ಬಿ.ಕೆ. ಪುಟ್ಟರಾಮಯ್ಯನವರು ಪ್ರಶ್ನಿಸಿದಾಗ ಶ್ರೀ ಪಣಿಕ್ಕರ್ ಅವರು ತಮಗೆ ಕನ್ನಡ ಬರುವುದಿಲ್ಲವೆಂದು ತಿಳಿಸಿದರು.