ಗುಂಡಿನೇಟಿನ ಪ್ರಕರಣದಲ್ಲಿಒಬ್ಬನ ಸಾವು, ನಾಲ್ವರಿಗೆ ಗಾಯ: ಮಡಕೇರಿ ಬಳಿ ಘಟನೆ
ಮಡಕೇರಿ, ಡಿ. 24 - ಇಲ್ಲಿಗೆ ಎಂಟು ಮೈಲಿಗಳ ದೂರದಲ್ಲಿರುವ ಬೆಟ್ಟಗೇರಿ ಎಂಬ ಹಳ್ಳಿಯಲ್ಲಿ ನಿನ್ನೆ ನಡೆದ ಗುಂಡಿನೇಟಿನ ಪ್ರಕರಣವೊಂದರಲ್ಲಿ ಒಬ್ಬನು ಸತ್ತು, ನಾಲ್ವರು ಗುಂಡಿನೇಟಿನಿಂದ ಗಾಯಗೊಂಡರೆಂದು ವರದಿಯಾಗಿದೆ.
ಚುಂಬಿ ಕಣಿವೆಯಲ್ಲಿ ಚೀಣೀ
ಸೇನಾ ಜಮಾವಣೆ
ನವದೆಹಲಿ, ಡಿ. 24 - ಚೀಣವು ಚುಂಬಿ ಕಣಿವೆಯಲ್ಲಿ ಸೇನೆಗಳನ್ನು ಜಮಾಯಿಸಿದೆಯೆಂಬ ವರದಿಗಳನ್ನು ಭಾರತದ ಸೇನೆಯ ಅಧಿಕಾರಿಗಳು ಬಲ್ಲರೆಂದೂ, ಆ ಬಗ್ಗೆ ಹೆಚ್ಚಿನ ವಿವರಗಳು ಕಾರ್ಯಾಚರಣೆಗೆ ಸಂಬಂಧಿಸಿದ ವಿಷಯವಾದುದರಿಂದ ತಾವು ಅದನ್ನು ಚರ್ಚಿಸುವಂತಿಲ್ಲವೆಂದೂ ವಿದೇಶಾಂಗ ಸಚಿವ ಶಾಖೆಯ ವಕ್ತಾರರೊಬ್ಬರು ಇಂದು ಇಲ್ಲಿ ತಿಳಿಸಿದರು.