ಆಡಳಿತ ಭಾಷೆ: ಮಸೂದೆ ಮಂಡನೆ
ಬೆಂಗಳೂರು, ಸೆ. 2- ಕನ್ನಡವನ್ನು ರಾಜ್ಯದ ಅಧಿಕೃತ ಭಾಷೆಯಾಗಿ ಅಂಗೀಕರಿಸುವ ಮಸೂದೆಯನ್ನು ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ಇಲ್ಲಿ ಮಳೆಗಾಲದ ಅಧಿವೇಶನವನ್ನು ಆರಂಭಿಸಿದ ಮೈಸೂರು ವಿಧಾನ ಸಭೆಯಲ್ಲಿ ಮಂಡಿಸಿದರು.
ಕನ್ನಡಕ್ಕೆ ರಾಜ್ಯದ ಅಧಿಕೃತ ಭಾಷೆಯಸ್ಥಾನ ಕೊಡುವ ಈ ಮಸೂದೆಯಲ್ಲಿ 1965ರ ಜನವರಿ 26ರ ನಂತರ, ವಿಧಾನ ಮಂಡಲದ ಕಾರ್ಯ ನಿರ್ವಹಣೆ ಹಾಗೂ ಆಡಳಿತ ಕಾರ್ಯಗಳಿಗೆ ಕನ್ನಡ ಹಾಗೂ ಹಿಂದೀ ಭಾಷೆಗಳೊಂದಿಗೆ, ಇಂಗ್ಲಿಷ್ ಭಾಷೆಯ ಬಳಕೆಗೂ ಅವಕಾಶ ಮಾಡಲಾಗಿದೆ.
ಕಾಶ್ಮೀರ ಕಣಿವೆಯಲ್ಲಿ ಭೂಕಂಪ
ಶ್ರೀನಗರ, ಸೆ. 2- ಕಾಶ್ಮೀರ ಕಣಿವೆಯಲ್ಲಿ ಇಂದು ಬೆಳಿಗ್ಗೆ 7-10ರ ಹೊತ್ತಿನಲ್ಲಿ ಭಾರಿ ಭೂಕಂಪ ಸಂಭವಿಸಿ ನೂರಕ್ಕೂ ಹೆಚ್ಚು ಮಂದಿ ಸತ್ತಿರುವರೆಂದು ಶಂಕಿಸಲಾಗಿದೆ.