ಸೇನಾ ಬಲ ದ್ವಿಗುಣಗೊಳಿಸಲು ನಿರ್ಧಾರ
ನವದೆಹಲಿ, ಏ. 8- `ಭಾರತದ ಪ್ರಸ್ತುತ ಸೇನಾ ಬಲವನ್ನು ಮುಂದಿನ ಕೆಲವು ವರ್ಷಗಳಲ್ಲಿ ದ್ವಿಗುಣಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ರಕ್ಷಣಾ ಮಂತ್ರಿ ಶ್ರೀ ವೈ. ಬಿ. ಚವ್ಹಾಣ್ ಅವರು ಇಂದು ಲೋಕ ಸಭೆಯಲ್ಲಿ ಹರ್ಷೋದ್ಗಾರಗಳ ನಡುವೆ ತಿಳಿಸಿದರು.
ಹಿಂದುಳಿದವರ ವರ್ಗೀಕರಣ ಆಧಾರದ ಬಗ್ಗೆ ತೀರ್ಮಾನ
ಬೆಂಗಳೂರು, ಏ. 8- ಸಾಮಾಜಿಕವಾಗಿ ಹಾಗೂ ಶಿಕ್ಷಣದಲ್ಲಿ ಹಿಂದುಳಿದ ವರ್ಗಗಳ ವರ್ಗೀಕರಣಕ್ಕೆ ಆಧಾರವನ್ನು ಮುಂದಿನ ಶಿಕ್ಷಣದ ವರ್ಷ ಆರಂಭವಾಗುವುದಕ್ಕೆ ಮುನ್ನ ತೀರ್ಮಾನಿಸಬೇಕಾಗಿದೆಯೆಂದು ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ವಿಧಾನ ಸಭೆಯಲ್ಲಿ ಶ್ರೀ ಜಿ. ವೆಂಕಟೇಗೌಡರಿಗೆ ತಿಳಿಸಿದರು.