ತಮ್ಮನ್ನು ಉತ್ಸವದಿಂದ ದೂರ ಇಡುವ ಉದ್ದೇಶದಿಂದಲೇ ರಾಜಸ್ಥಾನದ ಪೊಲೀಸರು ಜೀವ ಬೆದರಿಕೆಯ ಕತೆ ಕಟ್ಟುತ್ತಿದ್ದಾರೆ ಎಂದು ಆರೋಪಿಸಿರುವ ಸಲ್ಮಾನ್ ರಶ್ದಿ ಉತ್ಸವದಲ್ಲಿ ಪಾಲ್ಗೊಳ್ಳಲು ಉತ್ಸುಕತೆ ತೋರಿದ್ದರು. ಕೊನೆ ಗಳಿಗೆಯಲ್ಲಿ ಭದ್ರತೆಯ ಕಾರಣದಿಂದ ಅವರು ತಮ್ಮ ಭೇಟಿಯನ್ನು ರದ್ದು ಪಡಿಸಿದ್ದರು. ಆದರೆ ಅವರು ಈ ಕುರಿತು ಟ್ವೀಟ್ ಮಾಡುತ್ತ ಈ ಪರಿಸ್ಥಿತಿಯ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.