ರಾಯಚೂರು: ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿಮಠದಲ್ಲಿ ಇನ್ನು ಮುಂದೆ ಪ್ರತಿ ಗುರುವಾರ ಮತ್ತು ಶನಿವಾರ ‘ನಾದನಮನ’ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಪ್ರತಿ ಗುರುವಾರ ಮತ್ತು ಶನಿವಾರ ಸಂಜೆ 5.30ಕ್ಕೆ ಸಂಗೀತ ಕಲಾವಿದರು ಈ ‘ನಾದನಮನ’ ಭಕ್ತಿ ಸಂಗೀತ ಕಾರ್ಯಕ್ರಮ ನಡೆಸಿಕೊಡುವರು. ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿಮಠದ ಪೀಠಾಧಿಪತಿಗಳಾದ ಶ್ರೀ ಸುಯತೀಂದ್ರತೀರ್ಥ ಶ್ರೀಪಾದಂಗಳವರು ಇದೇ 9ರಂದು ಸಂಜೆ ನಾದನಮನ ಕಾರ್ಯಕ್ರಮ ಉದ್ಘಾಟಿಸುವರು.
ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಾವಿದರಾದ ಆರ್.ಕೆ ಶ್ರೀಕಂಠನ್ ಅವರು ಪ್ರಪ್ರಥಮ ನಾದನಮನ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ನಾದನಮನ ಸಂಗೀತ ಕಾರ್ಯಕ್ರಮ ನಿರಂತರ ಮುಂದುವರಿಯುವುದು.