ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂತ್ರಾಲಯಕ್ಕೆ ಭಕ್ತರ ಪಾದಯಾತ್ರೆ

Last Updated 10 ಜನವರಿ 2014, 6:00 IST
ಅಕ್ಷರ ಗಾತ್ರ

ಕಾರಟಗಿ:ಇಲ್ಲಿಯ ಹರೇ ಶ್ರೀನಿವಾಸ ಭಜನಾ ಮಂಡಳಿ ನೇತೃತ್ವದಲ್ಲಿ ಬೇವಿನಾಳ ಗ್ರಾಮದ 20 ಭಕ್ತರು ಪಾದಯಾತ್ರೆಯ ಮೂಲಕ ಮಂತ್ರಾಲ­ಯಕ್ಕೆ ಗುರುವಾರ ತೆರಳಿದರು.ರಾಘವೇಂದ್ರರಾವ್ ಕುಲ್ಕರ್ಣಿ ನಿವಾಸದಲ್ಲಿ ಹಾಗೂ ಕೋಟೆ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ಪಾದ­ಯಾತ್ರೆ ಆರಂಭಿಸಿದರು.

ನೇತೃತ್ವ ವಹಿಸಿದ್ದ ರಾಮರಾವ್ ಕುಲ್ಕರ್ಣಿ, ವ್ಯಾಸರಾಜ್, ಸುದೀಂದ್ರ ಮಾತನಾಡಿ 12ನೇ ವರ್ಷದ ಪಾದಯಾತ್ರೆ ಇದಾಗಿದೆ. ರಾಯರ ಅನುಗ್ರಹ ಪಡೆಯಲು ಹಾಗೂ ಆರೋಗ್ಯಕ್ಕೆ ಸಹಕಾರಿಯಾ­ಗುವುದ­ರಿಂದ ಪಾದಯಾತ್ರೆ ಮಾಡುವೆವು. ಮೊದಲ ದಿನ ದಡೇಸ್ಗೂರ, ಎರಡನೇಯ ದಿನ ಉರಕುಂದಿ ಈರಣ್ಣ ಬಳಿ ವಾಸ್ತವ್ಯ ಮಾಡಿ, 3ನೇ ದಿನ ಮಂತ್ರಾಲಯ ತಲುಪುವೆವು ಎಂದರು.ಭೋಗೇಶರಾವ್ ಕುಲ್ಕರ್ಣಿ, ನಾರಾಯಣರಾವ್, ರಾಘವೇಂದ್ರ­ರಾವ್ ಕುಲ್ಕರ್ಣಿ, ಸತ್ಯನಾರಾಯಣ ಕುಲ್ಕರ್ಣಿ, ಬಿಲ್ಗಾರ ನಾಗರಾಜ್, ಮಹೇಶಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT