ಕಾರಟಗಿ:ಇಲ್ಲಿಯ ಹರೇ ಶ್ರೀನಿವಾಸ ಭಜನಾ ಮಂಡಳಿ ನೇತೃತ್ವದಲ್ಲಿ ಬೇವಿನಾಳ ಗ್ರಾಮದ 20 ಭಕ್ತರು ಪಾದಯಾತ್ರೆಯ ಮೂಲಕ ಮಂತ್ರಾಲಯಕ್ಕೆ ಗುರುವಾರ ತೆರಳಿದರು.ರಾಘವೇಂದ್ರರಾವ್ ಕುಲ್ಕರ್ಣಿ ನಿವಾಸದಲ್ಲಿ ಹಾಗೂ ಕೋಟೆ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ಪಾದಯಾತ್ರೆ ಆರಂಭಿಸಿದರು.
ನೇತೃತ್ವ ವಹಿಸಿದ್ದ ರಾಮರಾವ್ ಕುಲ್ಕರ್ಣಿ, ವ್ಯಾಸರಾಜ್, ಸುದೀಂದ್ರ ಮಾತನಾಡಿ 12ನೇ ವರ್ಷದ ಪಾದಯಾತ್ರೆ ಇದಾಗಿದೆ. ರಾಯರ ಅನುಗ್ರಹ ಪಡೆಯಲು ಹಾಗೂ ಆರೋಗ್ಯಕ್ಕೆ ಸಹಕಾರಿಯಾಗುವುದರಿಂದ ಪಾದಯಾತ್ರೆ ಮಾಡುವೆವು. ಮೊದಲ ದಿನ ದಡೇಸ್ಗೂರ, ಎರಡನೇಯ ದಿನ ಉರಕುಂದಿ ಈರಣ್ಣ ಬಳಿ ವಾಸ್ತವ್ಯ ಮಾಡಿ, 3ನೇ ದಿನ ಮಂತ್ರಾಲಯ ತಲುಪುವೆವು ಎಂದರು.ಭೋಗೇಶರಾವ್ ಕುಲ್ಕರ್ಣಿ, ನಾರಾಯಣರಾವ್, ರಾಘವೇಂದ್ರರಾವ್ ಕುಲ್ಕರ್ಣಿ, ಸತ್ಯನಾರಾಯಣ ಕುಲ್ಕರ್ಣಿ, ಬಿಲ್ಗಾರ ನಾಗರಾಜ್, ಮಹೇಶಸ್ವಾಮಿ ಇದ್ದರು.