ಚಿತ್ರದುರ್ಗ: ಮಡಿಕೇರಿಯಲ್ಲಿ ಈಚೆಗೆ ನಡೆದ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಚಳ್ಳಕೆರೆಯ ಸಹ್ಯಾದ್ರಿ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯ ವಿ.ಕೆ. ವಿನಿಹಾ, ಜಾಹ್ನವಿ, ಮಣಿಕಂಠ, ಸಂದೀಪ್ ಮತ್ತು ಯಶ್ವಂತ್ಅವರನ್ನು ಒಳಗೊಂಡ ತಂಡ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.
`ಉಳಿಸದಿದ್ದಲ್ಲಿ ವಿದ್ಯುತ್ ಭವಿಷ್ಯದಲ್ಲಿ ಕಾದಿದೆ ಆಪತ್ತು' ಎನ್ನುವ ಯೋಜನೆಯನ್ನು ಈ ತಂಡದವರು ಮಂಡಿಸಿದ್ದರು.
ಇದೇ ಡಿ. 27ರಿಂದ 31ರವರೆಗೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಈ ಯೋಜನೆಯನ್ನು ಪುನಃ ಮಂಡಿಸಲಿದ್ದಾರೆ.
ಈ ವಿದ್ಯಾರ್ಥಿಗಳ ತಂಡ ರಾಷ್ಟ್ರಮಟ್ಟಕ್ಕೆ ಆಯ್ಕೆ ಆಗಿರುವುದಕ್ಕೆ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಶಾಲಾ ಸಿಬ್ಬಂದಿ ವರ್ಗ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿಯ ಅಧ್ಯಕ್ಷ ಚಳ್ಳಕೆರೆಯ ಯರ್ರಿಸ್ವಾಮಿ, ಕಾರ್ಯದರ್ಶಿಎಚ್.ಎಸ್.ಟಿ. ಸ್ವಾಮಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.