ಬೆಂಗಳೂರು: ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಸಮೀಪದ ಬಳಗಾರನಹಳ್ಳಿಯಲ್ಲಿ ವಿದ್ಯುತ್ ತಂತಿ ತಗುಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದ ಘಟನೆಗೆ ವಿಷಾದ ವ್ಯಕ್ತಪಡಿಸಿರುವ ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ (ಬೆಸ್ಕಾಂ), ರೂ4 ಲಕ್ಷ ಪರಿಹಾರ ನೀಡಿದೆ.
ಆಟವಾಡುತ್ತಿದ್ದ ಜಿಂಟುದಾಸ್ ಹಾಗೂ ಮಧುಸ್ಮಿತ ದಾಸ್ ತುಂಡಾಗಿ ಬಿದ್ದ ವಿದ್ಯುತ್ ತಂತಿಯನ್ನು ಮುಟ್ಟಿದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದರು. ಇವರು ಅತ್ತಿಬೆಲೆ ಸಮೀಪದ ಖಾಸಗಿ ಕಾರ್ಖಾನೆಯ ಕಾರ್ಮಿಕ ಅಸ್ಸಾಂ ಮೂಲದ ದೀಪಕ್ ದಾಸ್ ಮತ್ತು ಪ್ರಣೀತಾ ದಾಸ್ ದಂಪತಿ ಮಕ್ಕಳಾಗಿದ್ದರು.
ಬೆಸ್ಕಾಂ ವತಿಯಿಂದ ಪ್ರತಿ ಸಾವಿಗೆ ರೂ 2 ಲಕ್ಷದಂತೆ ರೂ 4 ಲಕ್ಷ ಮೊತ್ತದ ಪರಿಹಾರವನ್ನು ದಾಸ್ ದಂಪತಿಗೆ ಹಸ್ತಾಂತರಿಸಲಾಯಿತು.
ದಾಸ್ ದಂಪತಿಗಿದ್ದುದು ಇಬ್ಬರೇ ಮಕ್ಕಳು. ಇಬ್ಬರೂ ಘಟನೆಯಲ್ಲಿ ಮೃತಪಟ್ಟಿದ್ದಾರೆ.