ಮೈಸೂರಿನ ಒಡನಾಡಿ ಸ್ವಯಂಸೇವಾ ಸಂಸ್ಥೆ ಸಂತ್ರಸ್ತ ಬಾಲಕಿಯನ್ನು ರಕ್ಷಿಸಿದ್ದ ವೇಳೆ ಆಕೆ ನೀಡಿದ್ದ ಮಾಹಿತಿಯ ಅನ್ವಯ ಸಿಒಡಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ತಾರಾ, ದೀಪಾ, ರಿಕ್ಷಾ ಚಾಲಕ ಚಿತ್ರಾಪುರದ ಚಿತ್ತಪ್ಪನನ್ನು ವಶಕ್ಕೆ ಪಡೆದುಕೊಂಡಿದ್ದರೆ, ಭುವನೇಶ್ ತಲೆಮರೆಸಿಕೊಂಡಿದ್ದ.
ತಾರಾಳ ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಬಗ್ಗೆ ಸುರತ್ಕಲ್ ಪೊಲೀಸರಿಗೂ ಮಾಹಿತಿ ಸಿಕ್ಕಿತ್ತು. ಕಳೆದ ಅಕ್ಟೋಬರ್ನಲ್ಲಿ ಕುಳಾಯಿ ನಿವಾಸಿ ಸ್ಟೆಲ್ಲಾ ಎಂಬವರು ತನ್ನ ಗಂಡ ಅಶೋಕ ಪದೇ ಪದೇ ತಾರಾಳ ಮನೆಗೆ ಹೋಗಿ ಬರುತ್ತಿದ್ದು, ಅವರನ್ನು ಕರೆಸಿ ವಿಚಾರಣೆ ನಡೆಸಿ ನ್ಯಾಯ ಕೊಡಿಸಬೇಕೆಂದು ಠಾಣೆಗೆ ದೂರು ನೀಡಿದ್ದರು.