ಆದರೆ, ಪಾಲಕರ ಇಚ್ಛಾಶಕ್ತಿ ಕೊರತೆಯಿಂದಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕಲಿಕೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಯಶ ಕಾಣುತ್ತಿದೆ. ಹೀಗಾಗಿ ಸದೃಢ ಸಮಾಜ ನಿರ್ಮಾಣದ ಸರ್ಕಾರಗಳ ಕನಸು ಸಾಕಾರಗೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿನಿ ಮಹಬೂಬಿ ಕಳಕಾಪುರಗೆ ಇನ್ಸ್ಪೈರ್ ಅವಾರ್ಡ್ ಚೆಕ್ ವಿತರಿಸಲಾಯಿತು. ಮುಖ್ಯ ಶಿಕ್ಷಕ ಕೆ.ಐ.ಹಂಸನೂರ, ಎಸ್.ಸಿ.ಎಂ.ಸಿ ಸದಸ್ಯರಾದ ಎ.ಎಚ್್.ಕಟ್ಟಿಮನಿ, ಜಿ.ಬಿ.ಪತ್ತಾರ, ಐ.ಎಸ್.ಜಾಪಾಳ, ವೈ.ಎಚ್.ಪೂಜಾರ ಇತರರು ಹಾಜರಿದ್ದರು.