ಬಂಟ್ವಾಳ ಶಾಸಕ ರಮಾನಾಥ ರೈ ಮಾತನಾಡಿ, ಕೆಟ್ಟ ಸಂಸ್ಕೃತಿ ತೊಡೆದು ಹಾಕಿ, ಅತ್ಯುತ್ತಮ ಸಂಸ್ಕೃತಿ ಕಟ್ಟಬೇಕಾಗಿದೆ. ಇದರಿಂದ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ ಉದ್ಘಾಟಿಸಿದರು.
ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಅಧ್ಯಕ್ಷ ಚಿ.ನ.ರಾಮು, ಕನ್ಯಾನ ಗ್ರಾ.ಪಂ. ಅಧ್ಯಕ್ಷ ಕೆ.ಪಿ ಅಬ್ದುಲ್ ರಹಿಮಾನ್, ಸದಸ್ಯ ಕೆ.ಪಿ ರಘರಾಮ ಶೆಟ್ಟಿ, ದೈವ ನರ್ತಕ ಶೀನ ನಲಿಕೆ, ಚಿತ್ರನಟಿಯರಾದ ರಾಧಿಕಾ, ಆಲಿಶಾ, ಕಿರುತೆರೆ ನಟಿಯರಾದ ದೀಪಾ, ದೀಕ್ಷಾ ಹಾಗೂ ನಿರ್ದೇಶಕ ಎನ್.ಎಸ್.ಶ್ರೀಧರ್ ಇದ್ದರು.