ಈ ನಿಯೋಗದಲ್ಲಿ ಲೋಕಸಭೆಯ ವಿರೋಧಪಕ್ಷದ ನಾಯಕಿ ಸುಷ್ಮ ಸ್ವರಾಜ್, ಅರುಣ್ ಜೇಟ್ಲಿ ಮತ್ತು ಪಕ್ಷದ ಅಧ್ಯಕ್ಷ ನಿತಿನ್ ಗಡ್ಕರಿ ಸೇರಿದಂತೆ ಮಣಿಪುರದ ಇತರ ಪಕ್ಷದ ಮುಖಂಡರು ಇದ್ದರು. ರಾಜ್ಯದಲ್ಲಿ ಪರಿಸ್ಥಿತಿ ಹದಗೆಟ್ಟಿದೆ ಎಂದು ಅವರು ಪ್ರಧಾನಿಗೆ ತಿಳಿಸಿದರು. `ಮಣಿಪುರದ ಪರಿಸ್ಥಿತಿ ಬಗ್ಗೆ ಪ್ರಧಾನಿಗೆ ವಿವರಿಸಿದ ಅವರು ಅಗತ್ಯ ವಸ್ತುಗಳ ದರ ವಿಪರೀತ ಏರಿದೆ. ಪೆಟ್ರೊಲ್ ಮತ್ತು ಡೀಸಲ್ ಮನಸ್ಸಿಗೆ ಬಂದ ಬೆಲೆಗೆ ಮಾರಲಾಗುತ್ತಿದೆ . ತರಕಾರಿ ಬೆಲೆ ಏರಿದ್ದು ಶ್ರೀಮಂತರು ಸಹ ಅದನ್ನು ಕೊಳ್ಳುವಂತಿಲ್ಲ~ ಎಂದು ಹೇಳಿರುವುದಾಗಿ ವರದಿಗಾರರಿಗೆ ತಿಳಿಸಿದರು.