ಯಳಂದೂರು: ಬಾಯ್ತೆರೆದು ಕುಳಿತಿರುವ ಮೊಸಳೆ, ಹೆಡೆ ಎತ್ತಿ ನಿಂತಿರುವ ಸರ್ಪ, ಗಿರಿಬಿಚ್ಚಿ ಕುಳಿತ್ತಿರುವ ನವಿಲು, ಗಣಪ...
ಇದು ತಾಲ್ಲೂಕಿನಲ್ಲಿ ಈಚೆಗೆ ನಡೆದ ಪ್ರೌಢಶಾಲಾ ವಿಭಾಗದ ಹೋಬಳಿ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಮಕ್ಕ ಳ ಕೈಯಿಂದ ಮಣ್ಣಿನಲ್ಲಿ ರೂಪುಗೊಂಡ ಕಲಾಕೃತಿಗಳ ಝಲಕ್.
ವಿದ್ಯಾರ್ಥಿಗಳು ಕಪ್ಪು ಹಾಗೂ ಕಂದು ಮಣ್ಣನ್ನೇ ಬಳಸಿಕೊಂಡು ಮೂರ್ತ ಸ್ವರೂಪ ನೀಡಿ ನೋಡಗರನ್ನು ಬೆರಗುಗೊಳಿಸಿದ್ದು ಸತ್ಯ. ಪ್ರತಿಭಾ ಕಾರಂಜಿ ಯಲ್ಲಿ ಸ್ಥಳೀಯ ಕಲೆಗಳಿಗೆ ಹೆಚ್ಚು ಆದ್ಯತೆ ನೀಡಿದ್ದರಿಂದ ಈ ಕಲೆ ಅರಳಲು ಸಾಧ್ಯವಾಯಿತು.
ಶಿಕ್ಷಕರ ಮಾರ್ಗದರ್ಶನ ಹಾಗೂ ತಮ್ಮಲ್ಲಿನ ನೈಪುಣ್ಯತೆ ಸೇರಿಸಿ ತಾನು ಮೊಸಳೆಯನ್ನು ಮಾಡಿದೆ ಎನ್ನುತ್ತಾನೆ ಸುಷ್ಮಾ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಯೋಗೇಶ್.