ಬೆಳಗಾವಿ: ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಚಂದಗಡ ತಾಲ್ಲೂಕಿನ ಜಂಬ್ರೆ ಗ್ರಾಮದ ಬಳಿ ತಾಮ್ರಪರ್ಣಿ ನದಿಗೆ ಆಣೆಕಟ್ಟು ನಿರ್ಮಿಸಲು ತೆಗ್ಗು ತೋಡುತ್ತ್ದ್ದಿದಾಗ ಮಣ್ಣು ಕುಸಿದು ಮೂವರು ಕಾರ್ಮಿಕರು ಸಾವನ್ನಪ್ಪಿದ ಘಟನೆ ಬುಧವಾರ ನಡೆದಿದೆ.
ಬಿಹಾರದ ಬೈಶಾಲಿಯ ಜಾಗೀರ್ ಪಖೀಜಾ (40), ಆಂಧ್ರಪ್ರದೇಶದ ನೆಲ್ಲೂರಿನ ಶಶಿಧರ ರೆಡ್ಡಿ (52) ಹಾಗೂ ಮೆಹಬೂಬ್ನಗರದ ಯಲ್ಲಮ್ಮ ಭಂಡಾರಿ (35) ಸಾವನ್ನಪ್ಪಿದ್ದಾರೆ. ಚಂದಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.