ಮುಜಪ್ಫರ್ನಗರ(ಪಿಟಿಐ): ಗಲಭೆಗೆ ತುತ್ತಾಗಿದ್ದ ಮುಜಫ್ಫರ್ನಗರ ಪ್ರದೇಶದ ಜನರು ನಿರಾತಂಕವಾಗಿ ಮತ ಚಲಾಯಿಸುವಂತಾಗಲು ಹಾಗೂ ಅವರಲ್ಲಿ ವಿಶ್ವಾಸ ಮೂಡಿಸಲು ಜಿಲ್ಲಾಡಳಿತ ಸ್ಥಳೀಯರಿಗೆ ‘ವಿಶ್ವಾಸ ಕಾರ್ಡ್’ ವಿತರಿಸಿದೆ.
‘ವಿಶ್ವಾಸ ಕಾರ್ಡ್ನಲ್ಲಿ ಅಧಿಕಾರಿಗಳ ಸಂಪರ್ಕ ಸಂಖ್ಯೆ ಇರುತ್ತದೆ. ಮತದಾನದ ವೇಳೆ ಈ ಕಾರ್ಡ್ ಹೊಂದಿದವರಿಗೆ ಯಾವುದೇ ರೀತಿಯ ತೊಂದರೆ ಉಂಟಾದಲ್ಲಿ ಅದನ್ನು ಅಧಿಕಾರಿಗಳ ಗಮನಕ್ಕೆ ತರಬೇಕು. ಅಂತಹವರಿಗೆ ತಕ್ಷಣ ರಕ್ಷಣೆ ಒದಗಿಸಲಾಗುವುದು’ ಎಂದು ಪೊಲೀಸ್ ಅಧಿಕಾರಿ ಎಚ್.ಎನ್.ಸಿಂಗ್ ತಿಳಿಸಿದ್ದಾರೆ.
ವಿಶ್ವಾಸ ಕಾರ್ಡ್ ಅಲ್ಲದೇ ಕೆಲವರಿಗೆ ‘ಚೇತಾವಣಿ ಕಾರ್ಡ್’ (ಕೆಂಪು ಕಾರ್ಡ್) ಕೂಡ ನೀಡಲಾಗಿದೆ. ಮತದಾನದ ವೇಳೆ ಅಹಿತಕರ ಘಟನೆ ನಡೆದರೆ ಚೇತಾವಣಿ ಕಾರ್ಡ್ ಹೊಂದಿದವರು ಅದಕ್ಕೆ ಹೊಣೆಗಾರರಾಗುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.