ಡೆಹ್ರಾಡೂನ್ (ಪಿಟಿಐ): ಉತ್ತರಾಖಂಡ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಾಗಿದ್ದು, ಶನಿವಾರ ಮತ್ತೆ 68 ಮೃತದೇಹಗಳು ಪತ್ತೆಯಾಗಿವೆ.
ಕೇದಾರನಾಥ ದೇವಸ್ಥಾನಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಗೌರಿಚಟ್ಟಿ ಹಾಗೂ ಗೌರಿಕುಂಡ್ ಮಧ್ಯೆ ಮತ್ತೆ 68 ಶವಗಳು ಪತ್ತೆಯಾಗಿವೆ.
ಶವಗಳು ಕೊಳೆತ ಸ್ಥಿತಿಯಲ್ಲಿದ್ದು, ಸತ್ತವರನ್ನು ದುರಂತದಲ್ಲಿ ಮಡಿದ ಯಾತ್ರಾರ್ಥಿಗಳು ಎಂದು ನಂಬಲಾಗಿದೆ.