ಚೆನ್ನೈ, (ಪಿಟಿಐ): ~ನನ್ನ ಮುಂದಿನ ಚಿತ್ರ ~ಕೊಚಡೈಯನ್~ ಮೂಲಕ ನಾನು ಪುನಃ ಬೆಳ್ಳಿ ತೆರೆಯಲ್ಲಿ ಮಿಂಚಲಿದ್ದೇನೆ~ ಎಂದು ಮೂತ್ರಪಿಂಡ ತೊಂದರೆಯಿಂದ ಚೇತರಿಸಿಕೊಂಡಿರುವ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಹೇಳಿಕೊಂಡಿದ್ದಾರೆ.
ಮುಖ್ಯಮಂತ್ರಿ ಜಯಲಲಿತಾ ಅವರನ್ನು ಶುಕ್ರವಾರ ಭೇಟಿ ಮಾಡಿದ ರಜನಿಕಾಂತ್ ಅವರು, ಈಚೆಗೆ ~ಥಾಣೆ~ ಚಂಡಮಾರುತ ದಿಂದ ಸಂತ್ರಸ್ತರಾದವರ ಪರಿಹಾರ ನಿಧಿಗೆ 10 ಲಕ್ಷ ರೂಪಾಯಿ ದೇಣಿಗೆ ನೀಡಿದರು.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಮ್ಮ ಮುಂದಿನ ಮಹಾತ್ವಕಾಂಕ್ಷೆಯ ಚಿತ್ರದ ಬಗೆಗಿನ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಸಾಹಸಮಯ ~ಕೊಚಡೈಯನ್~ ಚಿತ್ರವು ಅತ್ಯಾಧುನಿಕ ತಂತ್ರಾಜ್ಞಾನದ ಸಹಾಯದಿಂದ ತಯಾರಾಗಲಿದ್ದು, ದೇಶದ ಚಿತ್ರರಂಗದ ಇತಿಹಾಸದಲ್ಲಿ ಮೊದಲ 3ಡಿ ಚಿತ್ರವಾಗಲಿದೆ. ಇದನ್ನು ನನ್ನ ಮಗಳು ಸೌಂದರ್ಯ ನಿರ್ದೇಶಿಸಲಿದ್ದಾಳೆ. ಈ ಚಿತ್ರದ ಚಿತ್ರೀಕರಣವು ಶೀಘ್ರದಲ್ಲಿಯೇ ಆರಂಭವಾಗಲಿದೆ~ ಎಂದರು.