ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಬೆಳ್ಳಿತೆರೆಯಲ್ಲಿ ಮಿಂಚುವೆ: ರಜನಿ

Last Updated 27 ಜನವರಿ 2012, 13:10 IST
ಅಕ್ಷರ ಗಾತ್ರ

ಚೆನ್ನೈ, (ಪಿಟಿಐ): ~ನನ್ನ ಮುಂದಿನ ಚಿತ್ರ ~ಕೊಚಡೈಯನ್~ ಮೂಲಕ ನಾನು ಪುನಃ ಬೆಳ್ಳಿ ತೆರೆಯಲ್ಲಿ ಮಿಂಚಲಿದ್ದೇನೆ~ ಎಂದು  ಮೂತ್ರಪಿಂಡ ತೊಂದರೆಯಿಂದ ಚೇತರಿಸಿಕೊಂಡಿರುವ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಹೇಳಿಕೊಂಡಿದ್ದಾರೆ.

ಮುಖ್ಯಮಂತ್ರಿ ಜಯಲಲಿತಾ ಅವರನ್ನು ಶುಕ್ರವಾರ ಭೇಟಿ ಮಾಡಿದ ರಜನಿಕಾಂತ್ ಅವರು, ಈಚೆಗೆ ~ಥಾಣೆ~ ಚಂಡಮಾರುತ ದಿಂದ ಸಂತ್ರಸ್ತರಾದವರ ಪರಿಹಾರ ನಿಧಿಗೆ 10 ಲಕ್ಷ  ರೂಪಾಯಿ ದೇಣಿಗೆ ನೀಡಿದರು.

ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಮ್ಮ ಮುಂದಿನ  ಮಹಾತ್ವಕಾಂಕ್ಷೆಯ ಚಿತ್ರದ ಬಗೆಗಿನ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಸಾಹಸಮಯ ~ಕೊಚಡೈಯನ್~ ಚಿತ್ರವು ಅತ್ಯಾಧುನಿಕ ತಂತ್ರಾಜ್ಞಾನದ ಸಹಾಯದಿಂದ ತಯಾರಾಗಲಿದ್ದು, ದೇಶದ ಚಿತ್ರರಂಗದ ಇತಿಹಾಸದಲ್ಲಿ ಮೊದಲ 3ಡಿ ಚಿತ್ರವಾಗಲಿದೆ. ಇದನ್ನು ನನ್ನ ಮಗಳು ಸೌಂದರ್ಯ ನಿರ್ದೇಶಿಸಲಿದ್ದಾಳೆ. ಈ ಚಿತ್ರದ ಚಿತ್ರೀಕರಣವು ಶೀಘ್ರದಲ್ಲಿಯೇ ಆರಂಭವಾಗಲಿದೆ~ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT