ನವದೆಹಲಿ (ಪಿಟಿಐ): ಗಾಂಧಿವಾದಿ ಅಣ್ಣಾ ಹಜಾರೆ ನೇತೃತ್ವದ ನಾಗರಿಕ ಸಮಾಜದ ಹೋರಾಟಗಾರರು ಮತ್ತೊಂದು ಉದ್ಘೋಷದೊಂದಿಗೆ ಧ್ವನಿ ಎತ್ತಲು ಅಣಿಯಾಗುತ್ತಿದ್ದಾರೆ.
ಉದ್ದೇಶಿತ ಲೋಕಪಾಲ ಕರಡು ಮಸೂದೆ ರಚನೆಯಲ್ಲಿ ನ್ಯಾಯಾಂಗ ಹಾಗೂ ಪ್ರಧಾನ ಮಂತ್ರಿಗಳನ್ನೂ ಸೇರ್ಪಡೆ ಮಾಡಬೇಕೆಂಬ ಬಲವಾದ ಒತ್ತಾಯವಿದೆ. ಇದರಿಂದ ಎಲ್ಲ ಸ್ತರಗಳಲ್ಲಿ ವ್ಯಾಪಕವಾಗಿ ಹಬ್ಬಿರುವ ಭ್ರಷ್ಟಾಚಾರವನ್ನು ಕೊನೆಗಾಣಿಸಲು ಸಹಾಯಕವಾಗುತ್ತದೆ ಎಂಬುದು ಹೋರಾಟಗಾರರ ವಾದವಾಗಿದೆ.
ಆದರೆ ಇಂತಹ ಒತ್ತಾಯಗಳು ಇಡೀ ಮಸೂದೆಯ ಸ್ವರೂಪ ಮತ್ತು ಗುರಿಯನ್ನು ಮುಟ್ಟಲಾರವು ಎಂದು ಮೂಲಗಳು ಶಂಕೆ ವ್ಯಕ್ತಪಡಿಸಿವೆ.