ಇಡೀ ದೇಶದ ಆಡಳಿತ ಸೂತ್ರ ಹಿಡಿದಿರುವ ಪ್ರಧಾನಿಗೆ ಎಲ್ಲೆಲ್ಲಿ ಎಷ್ಟು ನೀರಿದೆ ಎಂಬ ಅಂಕಿ ಅಂಶ ಗೊತ್ತಿಲ್ಲವೇ? ಇದನ್ನು ಕರ್ನಾಟಕ ಸರ್ಕಾರ ಕೊಡಬೇಕೇ? ಒಂದು ಸದ್ದಾದರೂ ಕೇಳಿ ತಕ್ಷಣ ಪ್ರತಿಕ್ರಿಯಿಸುವ ಸೂಕ್ಷ್ಮಮತಿ ರಾಜ್ಯಪಾಲರಿಗೂ ನಮ್ಮ ಜಲಾಶಯಗಳ ಅಂಕಿ ಅಂಶ ತಿಳಿಯದೇ?ಅವರೇಕೆ ಮೌನವಾಗಿದ್ದಾರೆ?
ಉದ್ಯಮಿಗಳಿಗೆ ರೈತರ ಬಗ್ಗೆ ಎಂದೂ ಕಾಳಜಿ ಇಲ್ಲ. ಆದರೆ ಕಾವೇರಿ ಕೇವಲ ರೈತರ ಸಮಸ್ಯೆ ಅಲ್ಲ ಬೆಂಗಳೂರಿನದೂ ಎಂಬುದನ್ನು ಮರೆತಿರುವುದೇ ಆಶ್ಚರ್ಯ. ಪೈರು ಕೈಕೊಟ್ಟರೆ ಆಮದು ಮಾಡಿಕೊಳ್ಳಬಹುದು. ಆದರೆ ಬೆಂಗಳೂರಿಗೆ ನೀರು? ಉದ್ಯಮಿಗಳ ಕಾರ್ಖಾನೆಗಳು ಕಾರ್ಮಿಕರಿಲ್ಲದೆ ನಡೆಯುತ್ತವೆಯೇ?