ತುಮಕೂರು: ಭವಿಷ್ಯದಲ್ಲಿ ಎದುರಾ ಗ ಲಿರುವ ಮಾನವನರ ಸಮಸ್ಯೆಗಳಿಗೆ ನ್ಯಾನೊ ತಂತ್ರಜ್ಞಾನ ಸಹಕಾರಿ ಯಾ ಗ ಲಿದೆ ಎಂದು ಶ್ರೀದೇವಿ ಎಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ.ಕೆ.ಸುಕು ಮಾರನ್ ಅಭಿಪ್ರಾಯ ಪಟ್ಟರು.
ನಗರದ ಶ್ರೀದೇವಿ ಎಂಜಿನಿಯರಿಂಗ್ ಕಾಲೇಜು ಭೌತಶಾಸ್ತ್ರ ವಿಭಾಗದ ವತಿ ಯಿಂದ ನ್ಯಾನೊ ತಂತ್ರಜ್ಞಾನ ಹಾಗೂ ಉಪಯೋಗ ಕುರಿತು ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು. ನ್ಯಾನೊ ವಿಸ್ಮಯಗಳ ಆಗರವಾಗಿದೆ.
ಈ ಹಿನ್ನೆಲೆಯಲ್ಲಿ ಉನ್ನತ ಅಧ್ಯಯನದಲ್ಲಿ ವಿದ್ಯಾರ್ಥಿಗಳು ಆಸಕ್ತಿ ತೊರಬೇಕು ಎಂದರು.
ಸಂಶೋಧಕ ಡಾ.ಫಕ್ರುದ್ಧಿನ್ ನ್ಯಾನೊ ತಂತ್ರಜ್ಞಾನ ಕುರಿತು ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಡಾ.ಕೆ.ಟಿ.ಕುಮಾರ್, ಡಾ.ಬಿ.ರಾಮದಾಸ್ ನ್ಯಾನೊ ಕುರಿತು ವಿಷಯ ಮಂಡಿಸಿದರು.
ಉಪಪ್ರಾಂಶುಪಾಲ ಪ್ರೊ.ಎ.ಎಂ. ಚಂದ್ರಶೇಖರಯ್ಯ ಇತರರಿ ದ್ದರು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಅಶ್ವಿನಿ ಸ್ವಾಗತಿ ಸಿದರು. ಪ್ರೊ.ಸಿ.ನಾಗ ರಾಜ್ ನಿರೂಪಿಸಿ ದರು. ಡಾ.ಎನ್. ಚಂದ್ರಶೇಖರ್ ವಂದಿಸಿ ದರು.