ಬೆಂಗಳೂರು: ನಗರದಲ್ಲಿ ಸೋಮವಾರ ಸುರಿದ ಮಳೆಯಿಂದಾಗಿ ಬಸವೇಶ್ವರ ನಗರ ಮೂರನೇ ಹಂತದಲ್ಲಿ ಮರವೊಂದು ಬಿದ್ದು ಒಂದು ಕಾರು ಹಾಗೂ ಇನ್ನಿತರ ವಾಹನಗಳು ಜಖಂಗೊಂಡಿವೆ.
ಬಸವೇಶ್ವರ ನಗರ ಮೂರನೇ ಹಂತದ ಒಂಬತ್ತನೇ ಮುಖ್ಯರಸ್ತೆಯಲ್ಲಿ ಮರವೊಂದು ಬಿದ್ದು ರಸ್ತೆಯಲ್ಲಿ ನಿಂತಿದ್ದ ಒಂದು ಕಾರು ಜಖಂಗೊಂಡಿದೆ.
ಎಂಟನೇ ಅಡ್ಡರಸ್ತೆಯಲ್ಲಿ ಮರದ ಕೊಂಬೆ ಮುರಿದು ಬಿದ್ದು, ಕೆಲವು ದ್ವಿಚಕ್ರ ವಾಹನಗಳು ಹಾಗೂ ಸೈಕಲ್ಗಳು ಹಾನಿಗೊಳಗಾಗಿವೆ.