ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಗಳಿಗೆ ಬಿಬಿಎಂಪಿ ಕೊಡಲಿ

ಹೈಕೋರ್ಟ್ ಆದೇಶದ ಉಲ್ಲಂಘನೆ
Last Updated 8 ಡಿಸೆಂಬರ್ 2013, 20:04 IST
ಅಕ್ಷರ ಗಾತ್ರ

ಬೆಂಗಳೂರು: ಕಳೆದ ವರ್ಷ ಬಿಬಿಎಂಪಿ­ಯು 3,000 ಮರಗಳನ್ನು ಧರೆಗುರು­ಳಿಸಿದೆ. ಅವುಗಳಲ್ಲಿ ಬಹುತೇಕ ಮರಗ­ಳಿಗೆ ತಡರಾತ್ರಿಯಲ್ಲಿ ಕೊಡಲಿ ಹಾಕಲಾ­ಗಿದೆ. ಆದರೆ ಹೊಸದಾಗಿ ಒಂದೂ ಸಸಿಗಳನ್ನು ನೆಡುವ ಕೆಲಸ ಮಾಡಿಲ್ಲ.

ಕರ್ನಾಟಕ ವೃಕ್ಷ ರಕ್ಷಣಾ ಕಾಯಿದೆ 1976ರ 14ನೇ ಸೆಕ್ಷನ್‌ನ  ಅಡಿ ನಗರದ ವೃಕ್ಷಗಳ ಮೇಲ್ವಿಚಾರಣೆಗೆ ಸ್ವತಂತ್ರ ಪ್ರಾಧಿಕಾರವನ್ನು ಮರು ರಚಿಸ­ಬೇಕು ಹಾಗೂ ಪಾಲಿಕೆ ಸದಸ್ಯರನ್ನು ಅದರಿಂದ ಹೊರಗಿಡಬೇಕು ಎಂದು  ಬಿಬಿಎಂಪಿಗೆ ನಿರ್ದೇಶಿಸಿ 2012ರ ನವೆಂಬರ್‌ನಲ್ಲಿ ಹೈಕೋರ್ಟ್ ಆದೇಶ ಹೊರಡಿಸಿತ್ತು.

ಹೊಸ ಪ್ರಾಧಿಕಾರ ರಚಿಸುವವರೆಗೂ ಮರಗಳನ್ನು ಕಡಿಯಲು ಅನುಮತಿ ನೀಡ­ಲು ಪಾಲಿಕೆಗೆ ಯಾವುದೇ ಅಧಿಕಾರವಿಲ್ಲ ಎಂದು ಆದೇಶವು ಸ್ಪಷ್ಟಪಡಿಸುತ್ತದೆ.

  ಪ್ರಾಧಿಕಾರದ ರಚನೆಗೆ ಪಾಲಿಕೆ ಮುಂ­ದಾ­ಗದಿದ್ದರೂ ನಿಯಮ ಬಾಹಿರ­ವಾಗಿ  ಮರಗಳನ್ನು ಕಡಿಯುತ್ತಿದೆ. ಪಾಲಿಕೆಯ ಅರಣ್ಯ ವಿಭಾಗದ ಅಧಿಕಾರಿಯೊಬ್ಬರು, ‘ಸಸಿ­ಗ­ಳನ್ನು ನೆಡುವುದರ ಹೊರತಾಗಿ ಮರಗಳ ಶಿಥಿಲಗೊಂಡ ಭಾಗಗಳನ್ನು ತೆರವುಗೊಳಿ­ಸು­ವುದಷ್ಟೇ ಪಾಲಿಕೆಯ ಅರಣ್ಯ ವಿಭಾಗದ ಪ್ರಮುಖ ಕೆಲಸ. ಪ್ರಾಧಿ­ಕಾರದ ರಚನೆಯಾದರೆ ವಿಭಾಗಕ್ಕೆ ಯಾವುದೇ ಕೆಲಸವಿರುವುದಿಲ್ಲ. ಆದ್ದ­ರಿಂದ ಪಾಲಿಕೆ ಆಧಿಕಾರಿಗಳು ಪ್ರಾಧಿ­ಕಾರದ ರಚನೆಯನ್ನು ನಿರ್ಲಕ್ಷಿಸಿದ್ದಾರೆ’ ಎಂದು ಹೇಳಿದರು.

ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರು ‘ ವಿಷಯದ ಬಗ್ಗೆ ನನಗೆ ತಿಳಿದಿದೆ. ಆದರೆ ನನ್ನ ಬಳಿಗೆ ಕಡತ ಬಂದಿಲ್ಲ. ಸೋಮವಾರ ಈ ಬಗ್ಗೆ ಗಮ­ನಹರಿಸಿ ಶೀಘ್ರದಲ್ಲಿ ಸಭೆ ಕರೆಯು­ತ್ತೇನೆ’ ಎಂದರು. ಪಾಲಿಕೆ ಆಯುಕ್ತ ಎಂ. ಲಕ್ಷೀನಾರಾಯಣ, ‘ಪ್ರಾಧಿ­­ಕಾರದ  ಬಗ್ಗೆ  ಪಾಲಿಕೆಯು ಇನ್ನೂ ಗಮನಹರಿಸಿಲ್ಲ’ ಎಂದು ಸ್ಪಷ್ಟಪಡಿ­ಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT