ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸಿಕ್ಕ ಅಭೂತಪೂರ್ವ ಬೆಂಬಲ ಭಾರತದ ಚುನಾವಣೆಗಳು ಹೊಸದಿಕ್ಕಿನತ್ತ ಹೊರಳುತ್ತಿರುವುದರ ಮುನ್ಸೂಚನೆ. ಈ ಸಾಧನೆಯು ಭ್ರಷ್ಟಾಚಾರ ರಹಿತ, ಪಾರದರ್ಶಕ ಮತ್ತು ಜವಾಬ್ದಾರಿಯುತ ಆಡಳಿತ ಬೇಕು ಎನ್ನುವ ಜನರಿಗೆ ಮರುಭೂಮಿಯಲ್ಲಿ ಓಯಸಿಸ್ನಂತೆ ಕಾಣುತ್ತಿದೆ.
ಚುನಾವಣೆ ಎಂದರೆ ಹಣ, ಹೆಂಡ, ಆಮಿಷಗಳ ಮೇಲಾಟವಾಗಿತ್ತು. ಆ ದಿನಗಳು ದೂರವಾಗಲಿವೆ ಎನ್ನುವ ಸುಳಿವನ್ನು ದೆಹಲಿ ಮತದಾರರು ನೀಡಿದ್ದಾರೆ. ಕೆಲವೇ ಜನರ ಕೈಯಲ್ಲಿ ಅಪಾರವಾದ ಸಂಪತ್ತು ಮತ್ತು ಅಧಿಕಾರದ ನೆಲೆಗಳು ಸಿಕ್ಕಿಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆ ಹದಗೆಟ್ಟಿರುವ ಸಮಯದಲ್ಲಿ ಮತದಾರರು ದಿಟ್ಟ ತೀರ್ಪು ಕೊಟ್ಟಿದ್ದಾರೆ. ಆಮ್ ಆದ್ಮಿಗಳ ಬಳಗ ದೊಡ್ಡದಾಗಲಿ.