ನಾನು ತುಂಬಾ ಚಿಕ್ಕವನಿದ್ದಾಗಿನಿಂದ ಪಿ.ಬಿ.ಶ್ರೀನಿವಾಸ್ ಅವರ ಮಧುರ ರಾಗದೊಳಗೆ ಮೀಯುತ್ತಾ, ಈಜಾಡುತ್ತಾ ಬೆಳೆದಿದ್ದೇನೆ. ಅವರ ಗಾನ `ಸುಧೆ' ಯನ್ನು ಆಗಾಗ ಕುಡಿದಿದ್ದೇನೆ.
ಅನೇಕಾನೇಕ ಹಾಡುಗಾರರನ್ನು, ಸಂಗೀತಗಾರರನ್ನು ಪರಿಚಯ ಮಾಡಿಕೊಂಡಿರುತ್ತೇನೆ. ಆದರೆ ಪಿ. ಬಿ. ಎಸ್. ರವರಲ್ಲಿರುವಂತೆ ಆ ಕಂಠದ ಸವಿರುಚಿ ಇನ್ಯಾರಲ್ಲಿಯೂ ನನಗೆ ದೊರೆತಿಲ್ಲ! ಅಂತಹ ಶಾರೀರ ಅವರಿಗೆ ಮಾತ್ರ ದೇವರು ಕೊಟ್ಟ ವರವೇ ಹೌದು. ಅವರು ಹಾಡಿರುವ ಸಾವಿರಾರು ಗೀತೆಗಳಲ್ಲಿ ಪ್ರಮುಖವಾಗಿ ಇಲ್ಲಿ ಮೂರನ್ನು ನೆನಪಿಸಿಕೊಳ್ಳುತ್ತೇನೆ.
(1) ಹೃದಯ ವೀಣೆ ಮಿಡಿಯೆ ತಾನೆ...;
(2) ಕನ್ನಡದ ಕುಲದೇವಿ ಕಾಪಾಡು ಬಾ ತಾಯೆ...;
(3) ಮನವೆ ಮಂದಿರ ನ್ಯಾಯದೇಗುಲ.... ಈ ಹಾಡು ಸದಾ ನನ್ನನ್ನು ಭಾವಪರವಶತೆಗೊಳಿಸಿ - ನನ್ನನ್ನು ನಾನೇ ಮರೆಯುವಂತೆ ಮಾಡುತ್ತವೆ. ಸಂಸ್ಕೃತ ಶ್ಲೋಕಗಳನ್ನು ಕೂಡ ಸುಶ್ರಾವ್ಯವಾಗಿ - ಭಕ್ತಿ ಪೂರ್ವಕವಾಗಿ ಪಿಬಿಎಸ್ ಹಾಡಿರುವುದೂ ಕೂಡ ಗಮನಾರ್ಹ.