ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೆವು ಅರಿವು ಪ್ರಚಾರ ಆರಂಭ

Last Updated 21 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಯಸ್ಸಾದವರಲ್ಲಿ ಕಂಡು ಬರುವ ಮರೆವಿನ ಸಮಸ್ಯೆಯನ್ನು ಗುರುತಿಸಿ ಚಿಕಿತ್ಸೆ ನೀಡಲು ನೈಟಿಂಗೇಲ್ ಸಂಸ್ಥೆಯು ಸೆ.21ರಿಂದ 23ರವರೆಗೆ ನಗರದಲ್ಲಿ ಜಾಗೃತಿ ಮತ್ತು ತಪಾಸಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

`ವಿಶ್ವ ಅಲ್ಜೀಮರ್ಸ್‌ (ಮರೆವು) ದಿನಾಚರಣೆ~ ಅಂಗವಾಗಿ ನಗರದಲ್ಲಿ ಬುಧವಾರ ರಾಜ್ಯ ಪೊಲೀಸ್ ಮಹಾನಿರ್ದೇಶಕ ನೀಲಂ ಅಚ್ಯುತರಾವ್ ಅವರು, ಸಂಸ್ಥೆಯ ತಪಾಸಣೆ ಮತ್ತು ಪ್ರಚಾರ ವಾಹನಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅಚ್ಯುತರಾವ್, `ವ್ಯಕ್ತಿಗಳಲ್ಲಿ ಮರೆವು ಆರಂಭದಲ್ಲಿ ತಮಾಷೆಯಂತೆ ಕಂಡು ಬಂದರೂ ಮುಂದಿನ ದಿನಗಳಲ್ಲಿ ಗಂಭೀರವಾಗುತ್ತದೆ. ದೇಶದಲ್ಲಿ ಸುಮಾರು 40 ಲಕ್ಷ ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬುದು ಆಶ್ಚರ್ಯಕರವಾಗಿದೆ. ರೋಗಿಗಳನ್ನು ನೋಡಿಕೊಳ್ಳುವವರಿಗೇ ಸೂಕ್ತ ತರಬೇತಿ ನೀಡುವ ಅಗತ್ಯವಿದೆ~ ಎಂದು ಹೇಳಿದರು.

ನಂತರ ಮಾತನಾಡಿದ ಸಂಸ್ಥೆಯ ಸದಸ್ಯೆ ಉಮಾ ಮೂರ್ತಿ, `ಶಾಂತಿನಗರ ಮತ್ತು ಮಲ್ಲೇಶ್ವರದಲ್ಲಿರುವ ಎರಡು ಕೇಂದ್ರಗಳ ಮೂಲಕ ಕಾರ್ಯಚಟುವಟಿಕೆಗಳನ್ನು ಮಾಡುತ್ತಿದ್ದೇವೆ. ಶಾಂತಿನಗರದಲ್ಲಿ ಅಂಗವಿಕಲರಿಗಾಗಿ ಮತ್ತು ಮಲ್ಲೇಶ್ವರದಲ್ಲಿ ಸಾಮಾನ್ಯರಿಗೆ ಯೋಗ ಮತ್ತಿತರ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದೇವೆ. ಸೂಕ್ತ ತರಬೇತಿ ಪಡೆದ 15 ಜನಗಳ ತಂಡವು ಈ ಸಮಸ್ಯೆ ಇರುವವರನ್ನು ಗುರುತಿಸಿ ಚಿಕಿತ್ಸೆ ನೀಡುತ್ತದೆ. ಮೂರು ದಿನಗಳ ಕಾಲ ಸಂಚರಿಸುವ ವಾಹನವು ನಗರದ ಪ್ರಮುಖ ಸರ್ಕಾರಿ ಆಸ್ಪತ್ರೆಗಳಿಗೆ ತೆರಳಿ ಅಲ್ಲಿರುವ ಹಿರಿಯ ರೋಗಿಗಳ ತಪಾಸಣೆ ನಡೆಸಲಿದೆ~ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT