ಮಲ ಹೋರುವ ಪದ್ಧತಿ ಇನ್ನೂ ಅಸ್ತಿತ್ವದಲ್ಲಿರುವುದು ದುಃಖದ ವಿಷಯವಾಗಿದೆ. ಸದ್ಯ ಭಾರತದಲ್ಲಿ 2.3 ಲಕ್ಷ ಕುಟುಂಬಗಳು ಶೌಚಾಲಯ ಶುದ್ಧಿ ಮಾಡುವ ಕೆಲಸದಲ್ಲಿ ನಿರತವಾಗಿವೆ ಎಂಬುದು ಹೆಮ್ಮೆ ತರುವ ಸಂಗತಿಯಲ್ಲ.ಕೇವಲ ನಗರ ಪ್ರದೇಶಗಳು ಅಭಿವೃದ್ಧಿ ಹೊಂದಿದರೆ ಅದು ಅಭಿವೃದ್ಧಿಯಲ್ಲ.
ಗ್ರಾಮೀಣ ಭಾಗದ ಸಾಮಾಜಿಕ ಸಮಸ್ಯೆಗಳು ಹಾಗೂ ಇಂತಹ ಪದ್ಧತಿಗಳೂ ನಿರ್ಮೂಲನೆ ಆಗಬೇಕು. ಹಾಗೆಯೇ ಎಷ್ಟೋ ಹಳ್ಳಿಗಳಲ್ಲಿ ದಲಿತರು ಗ್ರಾಮದ ಹೊರಗಡೆ ವಾಸಿಸುತ್ತಿದ್ದಾರೆ. ಅಂತಹ ಸ್ಥಿತಿ ನಿರ್ಮೂಲನೆಯಾಗಬೇಕು. ಎಲ್ಲರಿಗೂ ಸಮಪಾಲು ದೊರೆಯಬೇಕು. ಆಗ ಮಾತ್ರ ಅಭಿವೃದ್ಧಿ ಎಂದು ಹೇಳಲು ಸಾಧ್ಯ.