ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳವಳ್ಳಿ: ಕಬ್ಬು ಕಟಾವು ಯಂತ್ರ ಪ್ರಾತ್ಯಕ್ಷಿಕೆ

Last Updated 9 ಅಕ್ಟೋಬರ್ 2012, 8:35 IST
ಅಕ್ಷರ ಗಾತ್ರ

ಮಳವಳ್ಳಿ: ಪಟ್ಟಣದ ಹೊರವಲಯದಲ್ಲಿರುವ ರೈತ ಎಂ.ಬಿ.ಗೌಡರ ಜಮೀನಿನಲ್ಲಿ ಕಬ್ಬು ಕಟಾವು ಪ್ರಾತ್ಯಕ್ಷಿಕೆಯನ್ನು ಭಾನುವಾರ ನಡೆಸಲಾಯಿತು.

ಕೆ.ಎಂ.ದೊಡ್ಡಿ ಚಾಮುಂಡೇಶ್ವರಿ ಷುಗರ್ಸ್‌ ವತಿಯಿಂದ ತಮಿಳುನಾಡಿನಿಂದ ತರಿಸಿದ್ದ ಯಂತ್ರದಲ್ಲಿ ಕಬ್ಬು ಕಟಾವು ಮಾಡಲಾಯಿತು.

ಚಾಮುಂಡೇಶ್ವರಿ ಷುಗರ್ಸ್‌ನ ಸಹಾಯಕ ವ್ಯವಸ್ಥಾಪಕ ಚಂದ್ರೇಗೌಡ ಅವರು ಮಾತನಾಡಿ, ಕಾರ್ಮಿಕರು ಒಂದು ದಿನದಲ್ಲಿ ಒಂದು ಲಾರಿ ತುಂಬುವಷ್ಟು ಕಟಾವು ಮಾಡಬಹುದು. ಆದರೆ ಈ ಯಂತ್ರ 300 ಟನ್ ಕಟಾವು ಮಾಡುವುದರ ಜೊತೆಗೆ ಕಬ್ಬನ್ನು ಕತ್ತರಿಸಿ ಟ್ರ್ಯಾಕ್ಟರ್‌ಗೆ ತುಂಬುತ್ತದೆ. ಉಳಿದ  ಭಾಗವನ್ನು ಸುಡುವ ಬದಲು ಗೊಬ್ಬರವಾಗಿ ಉಪಯೋಗಿಸಿಕೊಳ್ಳಬಹುದು ಎಂದರು. ಒಂದು ಟನ್ ಕಬ್ಬು ಕತ್ತರಿಸಲು ರೂ.500 ನಿಗದಿಗೊಳಿಸಲಾಗಿದೆ. ಯಂತ್ರದ ಮೂಲಕ ಕತ್ತರಿಸಿದ ತಕ್ಷಣವೇ ಸಕ್ಕರೆ ಕಾರ್ಖಾನೆಗೆ ಸಾಗಿಸಲಾಗುತ್ತದೆ.

ಇದರಿಂದ ಕಾಯಬೇಕಾದ ಅನಿವಾರ್ಯತೆ ಇಲ್ಲ. ವೆಚ್ಚವು ಕಡಿಮೆ ಎಂದರು. ಜಮೀನಿನ ಮಾಲೀಕ ಎಂ.ಬಿ.ಗೌಡ, ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ಜಯಣ್ಣ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT