ಕಾರವಾರ: ಮಳೆಯಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ 32 ಕೋಟಿ ರೂ.ಗಳಷ್ಟು ಹಾನಿಯಾಗಿದೆ. 13 ಜನರು ಸಾವಿಗೀಡಾಗಿದ್ದಾರೆ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಮಂತ್ರಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಳೆಯಿಂದ 19 ಜಾನುವಾರು ಜೀವ ಕಳೆದುಕೊಂಡಿದೆ.
381 ಮನೆ ಹಾನಿಗೊಳಗಾಗಿದ್ದು 301ಕ್ಕೆ ಪರಿಹಾರ ನೀಡಲಾಗಿದೆ. 15 ಹೆಕ್ಟೇರ್ ತೋಟದ ಬೆಳೆ, 25 ಎಕರೆ ಕೃಷಿ ಭೂಮಿಯಲ್ಲಿ ಬೆಳೆ ಹಾನಿಗೊಳಗಾಗಿದೆ. ಕಳೆದ ವರ್ಷಕ್ಕಿಂತ 446 ಮಿಲಿಯನ್ ಮಳೆ ಹೆಚ್ಚಾಗಿದೆ. ಒಟ್ಟು 2953 ಮಿ.ಮೀ ಮಳೆ ಸುರಿದಿದ್ದು, ಭಟ್ಕಳ, ಮುಂಡಗೋಡದಲ್ಲಿ ಕಡಿಮೆ ಮಳೆಯಾಗಿದೆ.