ಮುಂದಿನ ವಾರದೊಳಗೆ ರಸಗೊಬ್ಬರ ಹಾಕದಿದ್ದರೆ ಬೆಳೆ ಕೈತಪ್ಪಿ ಹೋಗುವುದೆಂಬ ಆತಂಕದಿಂದಿ ರೈತರು ಪ್ರತಿದಿನ ಗೊಬ್ಬರಕ್ಕಾಗಿ ಗ್ರಾಮೀಣ ಪ್ರದೇಶದ ರೈತರ ಸೇವಾ ಸಹಕಾರ ಸಂಘ ಮತ್ತು ತಾಲ್ಲೂಕು ಕೇಂದ್ರದ ರಸಗೊಬ್ಬರ ಅಂಗಡಿಗಳಿಗೆ ಎಡತಾಕುವುದು ಸಾಮಾನ್ಯವಾಗಿದೆ.
ತಾಲ್ಲೂಕಿನಲ್ಲಿ 6,500 ಹೆಕ್ಟೇರ್ ಭತ್ತ, 26,500 ಹೆಕ್ಟೇರ್ ರಾಗಿ ಹಾಗೂ 2,000 ಹೆಕ್ಟೇರ್ ಕಬ್ಬು ಹಾಕಲಾಗಿದೆ. ಸೆಪ್ಟಂಬರ್ ಅಂತ್ಯದವರೆಗೆ 3,600 ಟನ್ ರಸಗೊಬ್ಬರ ಬೇಡಿಕೆ ಇದ್ದು, ಈಗಾಗಲೇ 3,000 ಸಾವಿರ ಟನ್ ಗೊಬ್ಬರ ಸರಬರಾಜಾಗಿದೆ.