ಕೋಲಾರ: ಜಿಲ್ಲೆಯಲ್ಲಿ ಹತ್ತು ದಿನದಿಂದ ಆಗಾಗ್ಗೆ ಬೀಳುತ್ತಿರುವ ಮಳೆಯು ರೈತರಲ್ಲಿ ಆಶಾಭಾವನೆಯನ್ನು ಮೂಡಿಸುತ್ತಿದೆ. ಮಳೆ ಇಲ್ಲದೆ ಸೊರಗಿದ್ದ ಜಿಲ್ಲೆಯ ಪ್ರಧಾನ ಬೆಳೆಯಾದ ರಾಗಿ ಮತ್ತು ಪೂರ್ಣ ಬೆಳೆಯಾದ ತೊಗರಿ ಚೇತರಿಕೆ ಕಂಡಿದೆ, ಮಳೆ ಪರಿಣಾಮ ಬೆಳೆನಷ್ಟದ ಪ್ರಮಾಣವೂ ಕಡಿಮೆ ಆಗುವ ಸಾಧ್ಯತೆ ಇದೆ.
ಆದರೂ, ಇನ್ನು ಮುಂದೆ ಸಮರ್ಪಕ ಮಳೆಯಾದಲ್ಲಿ ಮಾತ್ರ ಉತ್ತಮ ಫಸಲನ್ನು ನಿರೀಕ್ಷಿಸಬೇಕಾದ ಸನ್ನಿವೇಶವಿದೆ. ನೆಲಗಡಲೆ ಬೆಳೆಯು ಮಳೆ ಇಲ್ಲದೆ ಹೆಚ್ಚು ಒಣಗಿರುವುದರಿಂದ ಈಗಿನ ಮಳೆಯಿಂದಲೂ ಅದಕ್ಕೆ ಹೆಚ್ಚು ಅನುಕೂಲ ಆಗುತ್ತಿಲ್ಲ. ಹೀಗಾಗಿ ಇತ್ತೀಚಿನ ಮಳೆಯು ರೈತ ಸಮುದಾಯದಲ್ಲಿ ಹೆಚ್ಚಿನ ನಿರೀಕೆ್ಷಯನ್ನು ಹುಟು್ಟಹಾಕಿದೆ.
ಜಿಲ್ಲೆಯ ಒಟ್ಟಾರೆ ವಿಸ್ತೀರ್ಣದಲ್ಲಿ ಶೇ 70ರಷ್ಟು ಬಿತ್ತನೆ ಈಗಾಗಲೇ ಆಗಿದು್ದ, ಮಳೆ ಮುಂದುವರಿದರೆ ಉಳಿದ ಶೇ 30ರಷ್ಟು ಪ್ರದೇಶದಲ್ಲಿ ಹಿಂಗಾರು ಬಿತ್ತನೆಗೆ ಸೂಕ್ತ ವಾತಾವರಣ ಉಂಟಾಗುತ್ತದೆ. ಆಗಲೂ, ಮಳೆ ಕಡಿಮೆಯಾದರೂ ಬೆಳೆಯುವಂಥ ಅಲ್ಪಾವಧಿ ಬೆಳೆಗಳಾದ ಹುರುಳಿ, ಅಲಸಂದೆ ಬೆಳೆಯಲು ಸಾಧ್ಯವಷ್ಟೆ.
ಮೇ--- ಜೂನ್ ತಿಂಗಳಲ್ಲಿ ಬಿತ್ತನೆ ಮಾಡಿದ್ದ ತೊಗರಿಯು ಮಳೆ ಹಿನ್ನಡೆಯಿಂದ ಹೆಚ್ಚಿಗೆ ಬಾಡಿದು್ದ, ಈಗ ಚೇತರಿಸಿಕೊಂಡು ಹೂ ಬಿಡುವ ಹಂತಕ್ಕೆ ಬಂದಿದೆ. ಒಂದೆರಡು ಉತ್ತಮ ಮಳೆಯಾದರೆ ಹಸಿ ತರಕಾರಿಯಾಗಿ ಉತ್ತಮ ಬೆಳೆ ದಕ್ಕುವ ಸಾಧ್ಯತೆ ಇದೆ. ಹಿಂದಿನ ವರ್ಷಗಳಂತೆಯೇ ಉತ್ತಮ ಧಾರಣೆಯಿಂದ ಉತ್ತಮ ಆದಾಯವನ್ನು ರೈತರು ನಿರೀಕ್ಷಿಸುತ್ತಿದ್ದಾರೆ. 4500 ಹೆಕ್ಟೇರ್ ಗುರಿ ಪೈಕಿ 2541 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.
63000 ಹೆಕ್ಟೇರ್ ಪೈಕಿ 50814 ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿದು್ದ, ಮೊದಲು ಬಿತ್ತನೆಯಾದ ರಾಗಿಯು ತೆನೆ ಬರುವ ಹಂತದಲ್ಲಿದೆ. ತಡವಾಗಿ ಬಿತ್ತನೆ ಮಾಡಿದ ರಾಗಿ ಹೊಲಗಳಲ್ಲಿ ಕಳೆ ತೆಗೆಯುವ ಕೆಲಸ ಭರದಿಂದ ನಡೆಯುತ್ತಿದೆ.
ಮಳೆ ಮುಂದುವರಿದರೆ ರೈತರಿಗೆ ಹೆಚ್ಚು ಅನುಕೂಲವಾಗುತ್ತದೆ. ನಷ್ಟದ ಪ್ರಮಾಣವೂ ಕೊಂಚ ಕಡಿಮೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಿ.ಚಿಕ್ಕಣ್ಣ.
ಮುಳಬಾಗಲು ತಾಲ್ಲೂಕಿನ ಬೈರಕೂರು, ತಿಪ್ಪಸಂದ್ರ ಮೊದಲಾದ ಕಡೆ ಮಳೆ ಕಡಿಮೆಯಾಗಿರುವುದರಿಂದ ನೆಲಗಡಲೆ ಸುಧಾರಣೆಯಾಗಿಲ್ಲ. ಅದೇ ತಾಲ್ಲೂಕಿನ ತಾಯಲೂರು, ಆವಣಿ, ಬಂಗಾರಪೇಟೆ ತಾಲ್ಲೂಕಿನ ಕಾ್ಯಸಂಬಳಿ್ಳ ಮೊದಲಾದ ಕಡೆ ನೆಲಗಡಲೆ ಬಲಿಯುತ್ತಿದೆ ಎಂದು ಹೇಳುತ್ತಾರೆ. ಜಿಲ್ಲೆಯಲ್ಲಿ 13 ಸಾವಿರ ಹೆಕ್ಟೇರ್ ಗುರಿ ಪೈಕಿ 6767 ಹೆಕ್ಟೇರ್ ಪ್ರದೇಶದಲ್ಲಿ ನೆಲಗಡಲೆ ಬಿತ್ತನೆಯಾಗಿದೆ.
ರಾಗಿ ಪೈರುಗಳು ಈ ಹೊತ್ತಿಗೆ ಹೆಚ್ಚು ಬೆಳವಣಿಗೆ ಕಾಣಬೇಕಿತ್ತು. ಆದರೆ ಮಳೆಯೇ ಇಲ್ಲದ ಪರಿಣಾಮ ಮೇಲಕ್ಕೇಳದ ಸಿ್ಥತಿ ತಲುಪಿದ್ದವು. ಮಳೆ ಸುರಿಯುತ್ತಿರುವುದರಿಂದ ಚೇತರಿಕೆ ಕಾಣಿಸಿಕೊಂಡಿದೆ.
ರಾಗಿ ನಡುವೆ ಅಂತರ ಬೇಸಾಯದಲ್ಲಿ ಬೆಳೆದಿದ್ದ ಅವರೆಯಿಂದಲೂ ತಕ್ಕಮಟ್ಟಿಗಿನ ಲಾಭ ಸಿಗಬಹುದು ಎಂದು ತಾಲ್ಲೂಕಿನ ವಾನರಾಶಿ ಗ್ರಾಮದ ರೈತ ನಾರಾಯಣಸ್ವಾಮಿ ಹೇಳುತ್ತಾರೆ.
ಹಲವು ದಿನಗಳಿಂದ ಮಳೆಯಾಗುತ್ತಿದ್ದರೂ ಕೆರೆ, ಕುಂಟೆಗಳಿಗೆ ನೀರು ಬಂದಿಲ್ಲ. ಈಗಿನ ಮಳೆಯಿಂದ ಕೊಳವೆಬಾವಿಗಳಿಗೆ ಹೆಚ್ಚು ಪ್ರಯೋಜನವಿಲ್ಲ. ಉತ್ತಮ ಮಳೆಯಾದರೆ ಮಾತ್ರ ಕೊಳವೆಬಾವಿಗಳಲ್ಲಿ ನೀರು ಹೆಚ್ಚಾಗಬಹುದಷ್ಟೆ. ಆದರೆ ಅಂಥ ಮಳೆಗಾಗಿ ಕಾಯುತ್ತಲೇ ಇದ್ದೇವೆ ಎನ್ನುತ್ತಾರೆ ಕೋಲಾರ ತಾಲ್ಲೂಕಿನ ತಿಮ್ಮಸಂದ್ರದ ರೈತ ಶ್ರೀನಿವಾಸ್,
ಅವರು ತಮ್ಮ ಒಂದೂಕಾಲು ಎಕರೆಯಲ್ಲಿ ಟೊಮೆಟ ಬೆಳೆದಿದ್ದಾರೆ. ಇತ್ತೀಚಿನ ಮಳೆಯಿಂದ ಅವರ ಕೊಳವೆಬಾವಿಯಲ್ಲಿ ನೀರು ಹೆಚ್ಚಾಗಿಲ್ಲ. ಜೋರು ಮಳೆ ಬರದಿದ್ದರೆ ಬೇಸಿಗೆ ವೇಳೆಗೆ ನೀರಿನ ಅಭಾವ ಹೆಚ್ಚಾಗಬಹುದು ಎಂಬುದು ಅವರ ಆತಂಕ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.