ಬೆಂಗಳೂರು: 2010ನೇ ಸಾಲಿನ `ಬಸವ ಪುರಸ್ಕಾರ~ ಪ್ರಶಸ್ತಿ ಸಾಹಿತಿ ದೇ. ಜವರೇಗೌಡ ಅವರಿಗೆ ಹಾಗೂ 2008ನೇ ಸಾಲಿನ ಬಸವ ಪುರಸ್ಕಾರ ಪ್ರಶಸ್ತಿ ಬಾಗಲಕೋಟೆ ಜಿಲ್ಲೆಯ ಇಳಕಲ್ಲಿನ ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಡಾ. ಮಹಾಂತ ಸ್ವಾಮೀಜಿ ಅವರಿಗೆ ಸಂದಿದೆ.
ಪ್ರಶಸ್ತಿಯು 10 ಲಕ್ಷ ರೂಪಾಯಿ ನಗದು ಹಾಗೂ ಬಸವ ಪುತ್ಥಳಿಯನ್ನು ಒಳಗೊಂಡಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.