ಮಾಗಡಿ: ಪಟ್ಟಣದ ತಿರುಮಲ ಶ್ರೀರಂಗನಾಥ ಸ್ವಾಮಿ ದೇವಾಲಯದ ಬಳಿ ದುಷ್ಕರ್ಮಿಗಳು ಪಟ್ಟಿಗೆ ಅಂಗಡಿಗೆ ಬೆಂಕಿ ಹಚ್ಚಿದ್ದಾರೆ.
ಅಂಗಡಿಯಲ್ಲಿದ್ದ ರೂ50 ಸಾವಿರ ಬೆಲೆಬಾಳುವ ವಸ್ತುಗಳು ಸುಟ್ಟು ಭಸ್ಮವಾಗಿವೆ ಎಂದು ಅಂಗಡಿ ಮಾಲೀಕ ಸತೀಶ್ ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಜೂಜಾಟ: ನಾಲ್ವರ ಬಂಧನ
ಮಾಗಡಿ: ನಾಗನಹಳ್ಳಿ ಕೆರೆ ಬಯಲಿನಲ್ಲಿ ಜೂಜಾಡುತ್ತಿದ್ದ ನಾಲ್ವರನ್ನು ಬಂಧಿಸಲಾಗಿದೆ. ಜೂಜಾಟಕ್ಕೆ ಬಳಸಿದ್ದ ರೂ 33,250 ನಗದು ಮತ್ತು ಒಂದು ಮಾರುತಿ ಕಾರು ಹಾಗೂ 2ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುವುದಾಗಿ ಸಬ್ ಇನ್ಸ್ಪೆಕ್ಟರ್ ಬಿ.ಎಸ್.ಅಶೋಕ್ ತಿಳಿಸಿದ್ದಾರೆ. ವೆಂಕಟ ಹನುಮಯ್ಯ, ನಾಗರಾಜು, ರಮೇಶ್, ಪುರುಷೋತ್ತಮ್ ಅವರನ್ನು ಬಂಧಿಸಲಾಗಿದೆ.